ಮಂಗಳೂರು: ಮುಸ್ಲಿಮ್ ಹೊರತಾದ ಭಾರತ ಸಂವಿಧಾನ ರಚಿಸುತ್ತೇವೆ, ಈ ದೇಶದ ಮುಸ್ಲಿಮರಿಗೆ ಸರಕಾರಿ ಸವಲತ್ತನ್ನು ನಿರಾಕರಿಸುವ ಆಡಳಿತ ವ್ಯವಸ್ಥೆಯನ್ನೂ ಸೃಷ್ಟಿಸುತ್ತೇವೆ ,ಎಂಬಿತ್ಯಾದಿಯಾಗಿ ವಿ.ಎಚ್.ಪಿ ನಾಯಕ ಪ್ರವೀಣ್ ತೊಗಾಡಿಯಾ ರವರು ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಮತ್ತು ಇಂತಹ ಹೇಳಿಕೆ ನಿರ್ಲಕ್ಷ್ಯಕ್ಕೆ ಅರ್ಹವಾಗಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಂತಹ ಪ್ರಾಚೀನ ಪರಂಪರೆಯುಳ್ಳ ಭೌಗೋಳಿಕ, ನಿಸರ್ಗ ವ್ಯವಸ್ಥೆಯಲ್ಲಿ ಕೊಡು ಕೊಳ್ಳುವಿಕೆ ರಕ್ತ ಸಹಜ.ಇಂತಹಾ ಜನ ಸಹಕಾರ ವ್ಯವಸ್ಥೆಯಲ್ಲಿ ಧರ್ಮಾನುಯಾಯಿ ಸಮುದಾಯ ಹೊರತಾದ ಸಂವಿಧಾನ ವ್ಯವಸ್ಥೆ ಸೃಷ್ಟಿಸುವುದು ಅಪ್ರಾಯೋಗಿಕ ಎಂದು ಪ್ರವೀಣ್ ತೊಗಾಡಿಯಾರ ಅನುಯಾಯಿಗಳು ಅರಿಯುವುದು ಒಳಿತು.
ಪ್ರವೀಣ್ ತೊಗಾಡಿಯಾ ಅನುಯಾಯಿಗಳು ಅಂತಹ ಕನಸು ಕಾಣುವುದನ್ನು ಈಗಲೇ ತ್ಯಜಿಸುವುದು ಅಷ್ಟೇ ಒಳಿತು. ಭಾರತ ನೆಲೆ ಹೊಂದಿರುವುದೇ ಶಾಸನಗಳ ಚರಿತ್ರೆಯಿಂದ ಎಂದು ಇತಿಹಾಸವೇ ಹೇಳುತ್ತದೆ. ಭಾರತ ಉಪಖಂಡದ ಅಷ್ಟೂ ಶಾಸನಗಳು ಧರ್ಮಾಧಾರಿತ ವಾಗಿದೆ ಮತ್ತು ಧರ್ಮಕ್ಕೆ ಆತಿಥ್ಯ ನೀಡಿದ ಹೊರತಾದ ಒಂದೇ ಒಂದು ಶಾಸನವೂ ಈ ದೇಶದಲ್ಲಿ ಲಭ್ಯವಿಲ್ಲ ಎಂಬುದನ್ನು ತೊಗಾಡಿಯಾ ಅನುಯಾಯಿಗಳು ಅರಿಯುವುದು ಒಳಿತು ಎಂದು ಕೆ.ಅಶ್ರಫ್(ಮಾಜಿ ಮೇಯರ್)ಅಧ್ಯಕ್ಷರು,ದ.ಕ.ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ