janadhvani

Kannada Online News Paper

ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ- ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರ ಕರೆ

ನಾಪೋಕ್ಲು ಏ29:(ಜನಧ್ವನಿ ವಾರ್ತೆ) ನಿಸ್ವಾರ್ಥ ಮನೋಭಾವದಿಂದ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಎಸ್ಸೆಸ್ಸಫ್ ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷ ಪಿ.ಎ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅವರು ಕರೆನೀಡಿದರು,ಎಸ್ಸೆಸ್ಸಫ್ ನ 46ನೇ ಸ್ಥಾಪಕ ದಿನಾಚರಣೆಯ ಅಂಗವಾಗಿ ಎಸ್ಸೆಸ್ಸಫ್ ಕೊಟ್ಟಮುಡಿ ಶಾಖೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಿರ್ವಹಿಸಿ ಮಾತನಾಡಿದ ಅವರು ಪೂರ್ವಿಕರಾದ ನಿಷ್ಕಳಂಕ ಕಾರ್ಯಕರ್ತರ ತ್ಯಾಗಮಯ ಜೀವನ ಪ್ರತೀ ಒಬ್ಬ ಕಾರ್ಯಕರ್ತನೀಗೂ ಮಾದರಿಯಾಗಲಿ ಎಂದು ಶುಭಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಮರ್ಕಝ್ ದಅವಾ ಕಾಲೇಜ್ ಪ್ರಾಂಶುಪಾಲರಾದ ಶಿಹಾಬುದ್ದೀನ್ ನೂರಾನಿ,ಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ಲಾ ಕೊಳಕೇರಿ,ಕೊಟ್ಟಮುಡಿ ಶಾಖ ಉಪಾದ್ಯಕ್ಷರುಗಳಾದ ಹ್ಯಾರಿಸ್,ಬಷೀರ್,ಸಮಿತಿ ಸದಸ್ಯರು,ಎಸ್ಸೆಸ್ಸಫ್ ನಾಪೋಕ್ಲು ಸೆಕ್ಟರ್ ಪ್ರದಾನ ಕಾರ್ಯದರ್ಶಿ ಸಲಾಉದ್ದಿನ್,ಮಡಿಕೇರಿ ಡಿವಿಷನ್ ಉಪಾಧ್ಯಕ್ಷ ಯೂನುಸ್,ಮರ್ಕಝ್ ದಅವಾ ವಿದ್ಯಾರ್ಥಿಗಳು ಹಾಗು ಶಾಖ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com