janadhvani

Kannada Online News Paper

ಸಕಲೇಶಪುರ ನಿವಾಸಿ ಯಾಕೂಬ್ ಜಿದ್ದಾದಲ್ಲಿ ನಿಧನ- ಕೆಸಿಎಫ್ ಸಹಕಾರದೊಂದಿಗೆ ಅಂತ್ಯಕ್ರಿಯೆ

ಸೌದಿ ಅರೇಬಿಯಾ: ಜಿದ್ದಾದಲ್ಲಿ ಮೃತಪಟ್ಟ ಯಾಕೂಬ್ ಸಕಲೇಶಪುರ ಎಂಬವರ ಅಂತ್ಯಕ್ರಿಯೆಯು ನವೆಂಬರ್ 6 ಭಾನುವಾರ (ಇಂದು) ಜಿದ್ದಾದ ಬಾಬ್ ಮಕ್ಕಾದಲ್ಲಿರುವ ಮಖ್ಬರ ಅಲ್ ಅಸದ್ ನಲ್ಲಿ ಕುಟುಂಬಸ್ತರು ,ಸ್ನೇಹಿತರು ಹಾಗೂ ಕೆಸಿಎಫ್ ನ ನೇತಾರರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಸೌದಿ ಅರೇಬಿಯಾದಲ್ಲಿ ಹೌಸ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ 04/11/2021 ರಂದು ಮೃತಪಟ್ಟಿದ್ದಾರೆ.

ಮರಣ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತರಾದ ಕೆಸಿಎಫ್ ಶರಫಿಯ್ಯ ಸೆಕ್ಟರ್ ಹಾಗೂ ಜಿದ್ದಾ ಝೋನ್ ಸಾಂತ್ವನ ಇಲಾಖೆಯ ನೇತಾರರಾದ ನಾಸಿರ್ ಹೆಚ್ಕಲ್ ಹಾಗೂ ಫಾರೂಕ್ ಬಂಟ್ವಾಳ , ಮದೀನಾ ಝೋನ್ ನೇತಾರರಾದ ರಝಾಕ್ ಉಳ್ಳಾಲ ಹಾಗೂ ಸಂಬಂಧಿಕರಾದ ರಹೀಂ ದುಬೈ ರವರು ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ದಾಖಲೆ ಪತ್ರಗಳು ,ಭಾರತೀಯ ರಾಯಭಾರಿ ಕಚೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ಮಯ್ಯತ್ ದಫನ ಕಾರ್ಯ ಶೀಘ್ರ ಗತಿಯಲ್ಲಿ ನಡೆಸಲು ಸಹಕರಿಸಿದರು.

ಮಯ್ಯತ್ ದಫನ ಕಾರ್ಯದಲ್ಲಿ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಅಬ್ದುಲ್ ರಹ್ಮಾನ್ ತಂಙಲ್, ಹಮೀದ್ ಹಾಜಿ ಸಾಗರ್ ,ಮೊಯ್ದೀನ್ ಕುದ್ರೋಳಿ , ಮುಹಮ್ಮದ್ ಕುಕ್ಕಾಜೆ,ಯೂಸೂಫ್ ಕುಕ್ಕಾಜೆ,ರಫೀಕ್ ಎರ್ಮಾಳ್,ಫೈಝಲ್ ಸಕಲೇಶಪುರ ಸೇರಿದಂತೆ ಕೆಸಿಎಫ್ ಕಾರ್ಯಕರ್ತರು ಹಾಗೂ ಹಿತೈಸಿಗಳು ಭಾಗವಹಿಸಿದ್ದರು.