ದಮ್ಮಾಮ್: ಕರ್ನಾಟಕದ ಮರ್ಕಝ್ ಎಂದೇ ಪ್ರಖ್ಯಾತ, ಮರ್ಹೂಂ ಶರಫುಲ್ ಉಲಮಾರ ದಿವ್ಯ ನೇತ್ರತ್ವದಲ್ಲಿ ಜನ್ಮತಾಳಿ ಜನ ಮನ್ನಣೆ ಪಡೆದ, ಧಾರ್ಮಿಕ ಲೌಕಿಕ ವಿಧ್ಯಾ ಕೇಂದ್ರ,
ಸಮಾಜ ಮುಖಿ ಸೇವೆಗಳಲ್ಲಿ
ತನ್ನದೇ ಆದ ಛಾಪನ್ನು ಮೂಡಿಸಿದ,
ಸಮುದಾಯಕ್ಕೆ ಬಹುಮುಖ ಪ್ರತಿಭೆಗಳನ್ನು ಕೊಡುಗೆ ನೀಡಿದ ಮಹಾ ಸಂಸ್ಥೆ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ.
ಇದರ ಸೌದಿ ಅರೇಬಿಯಾದ ಈಸ್ಟೆನ್ ಪ್ರೋವಿನ್ಸ್ ಸಮಿತಿಯ (ದಮ್ಮಾಂ, ಕೋಬಾರ್, ಜುಬೈಲ್, ಅಲ್ ಹಸ್ಸಾ, ಹಫರಲ್ ಬಾತಿನ್) ವಾರ್ಷಿಕ ಮಹಾಸಭೆಯು 29 ಸೆಪ್ಟೆಂಬರ್ ಗುರುವಾರದಂದು ಅಜೀಜ್ ಮುಸ್ಲಿಯಾರ್ ಕುತ್ತಾರ್’ ರವರ ನಿವಾಸದಲ್ಲಿ ಅಬ್ದುರಹ್ಮಾನ್ ಮದನಿ (ಹೊಸಂಗಡಿ) ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಬಷೀರ್ ತೋಟಾಲ್ ರವರು ಹೊಸ ಸಮಿತಿಯ ಆಯ್ಕೆ ಪ್ರಕ್ರಿಯಕ್ಕೆ ನೇತ್ರತ್ವ ವಹಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸಲಹಾ ಸಮಿತಿ ಚೆಯರ್ಮೇನ್ N.S ಅಬ್ದುಲ್ಲ ಮಂಜನಾಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಡಿಕ್ಕಲ್, ಗಫೂರ್ ಸಜಿಪ ಮತ್ತು ಇನ್ನಿತರ ನೇತಾರರು ಬಾಗವಹಿಸಿದ್ದರು.
2022/24 ನೇ ಸಾಲಿನ ನೂತನ ಸಮಿತಿ
ಸಲಹಾ ಸಮಿತಿ ಚೆಯರ್ಮೇನ್: MKM ಅಬೂಬಕರ್ ಮದನಿ ಹೊಸಂಗಡಿ
ಸಲಹಾ ಸಮಿತಿ ಸದಸ್ಯರು
N.S ಅಬ್ದುಲ್ಲ ಮಂಜನಾಡಿ
ಅಬ್ದುಲ್ ಗಫೂರ್ ಸಜಿಪ
ಬಷೀರ್ ತೋಟಾಲ್
ಅಸ್ರು ಬಜಪೆ
ಅಧ್ಯಕ್ಷರು: ಮುಹಮ್ಮದ್ ಮಲೆಬೆಟ್ಪು
ಉಪಾಧ್ಯಕ್ಷರು:
ಮೂಸ ಹಾಜಿ ಕಿನ್ಯ
ಭಾಷಾ ಗಂಗಾವಳಿ
ಬಾಬಾ ಲತೀಫ್
ಪ್ರಧಾನ ಕಾರ್ಯದರ್ಶಿ: ಆಬಿದ್ ಕೊಡಗು
ಕಾರ್ಯದರ್ಶಿಗಳು
ಅಶ್ರಫ್ ನಾವುಂದ
ಇಬ್ರಾಹೀಂ ಚೋಕಾ
ಖೋಶಾಧಿಕಾರಿ: ರಷೀದ್ ವಳವೂರು
ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಅಬೂಬಕ್ಕರ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಮೌಲೀದ್ ಸದಸ್ಸಿನೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಇಸ್ಮಾಯಿಲ್ ಪೊಯ್ಯಲ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಆಬಿದ್ ಕೊಡಗು ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ