ಮಂಗಳೂರು :ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ ) ಸಂಸ್ಥೆಯ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಆಚರಣೆಯ ಸಲುವಾಗಿ ಬೃಹತ್ ರಕ್ತದಾನ ಶಿಬಿರವು ಎ.ಜೆ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ ಬಂದರ್ ರಸ್ತೆಯಲ್ಲಿ ಯಶಸ್ವಿಯಾಗಿ ಜರುಗಿತು.
ಈ ಶಿಬಿರವನ್ನು ಮಂಗಳೂರಿನ ಕೇಂದ್ರ ಮಸೀದಿಯ ಧರ್ಮ ಗುರುಗಳಾದ ಅಕ್ರಮ್ ಬಾಖವಿಗಳವರ ದುಆಶೀರ್ವಚನೆಯೊಂದಿಗೆ ಆರಂಭಿಸಲಾಯಿತು. ಕಳೆದು ಹೋದ ಮಹಾನ್ ವ್ಯಕ್ತಿಗಳ ಚರ್ಯೆಯನ್ನು ನೆನಪಿಸಿ ಇನ್ನೂ ಕೂಡಾ ಇಂತಹ ಸಮಾಜ ಕ್ಕೆ ಒಳಿತಾಗುವ ಕಾರ್ಯಕ್ರಮ ಮಾಡಲು ಸರ್ವಶಕ್ತನು ಅನುಗ್ರಹಿಸಲಿ ಎಂದು ಆಶೀರ್ವಧಿಸಿದರು.
ಅತಿಥಿ ಗೊಳಲ್ಲೊಬ್ಬರಾದ ಅಡ್ವೊಕೇಟ್ ಮುಹಮ್ಮದ್ ಹನೀಫ್ ಮಾತನಾಡಿ ಹಿಂದೂ ಮುಸ್ಲಿಂ ಕ್ರೈಸ್ತ ರೆಲ್ಲಾ ಒಂದೇ , ಎಲ್ಲಾ ಮನುಷ್ಯರೂ ಅವರು ವಸ್ತ್ರಗಳಿಂದ ಬೇರೆ ಬೇರೆ ಆದರೂ ಒಳಗಿಂದ ಒಂದೇ , ಎಲ್ಲರ ರಕ್ತ ಇತರ ಶರೀರದ ಭಾಗಗಳು ಒಂದೇ ,ಎಲ್ಲಕ್ಕಿಂತಾ ಬಹಳ ಪುಣ್ಯವಾದ ದಾನಗಳಲ್ಲಿ ಮೊದಲು ಬರುವುದು ರಕ್ತದಾನವೆಂದು ಹೇಳಿದರು.
ಪ್ರಪ್ರಥಮ ಬಾರಿಗೆ ಮಂಗಳೂರಿನ ವ್ಯಾಪಾರ ಕೇಂದ್ರ ವಾದ ಬಂದರಿನ ರಸ್ತೆಯಲ್ಲಿ ನೌಫಲ್ ಹೋಟೆಲಿನ ಹತ್ತಿರದ ಆರೀಫ್ ರವರ ಇನ್ನೂ ಉದ್ಘಾಟನೆ ಗೊಳ್ಳದ ಕಟ್ಟಡದಲ್ಲಿ ಸುಸಜ್ಜಿತವಾಗಿ, ಸಂಘಟನೆಯ ಸದಸ್ಯರ ಪರಿಶ್ರಮದ ಫಲವಾಗಿ ಸುಮಾರು 70 ರಷ್ಟು ಜನ ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.
ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್
ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಸಂಸ್ಥೆಯು 25 ಮಂದಿ ಸ್ನೇಹಿತರಿಂದ ಅಶಕ್ತ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡ ಒಂದು ಸಂಘಟನೆಯಾಗಿದ್ದು ,ತಮ್ಮಲ್ಲಿಯೇ ಮಾಸಿಕ ವಂತಿಗೆ ಹಣ ಸಂಗ್ರಹಣ ಮಾಡಿ ಅದನ್ನು ಆರಿಸಿದ, ಕಷ್ಟದಲ್ಲಿರುವ ಅಶಕ್ತ ರೋಗಿಗಳಿಗೆ ನೀಡುತ್ತಾ ಬಂದಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ