ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಷ್ಟ್ರ ಭಕ್ತಿಯೊಂದಿಗೆ ರಾಜ್ಯದ ಸರ್ವ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಮದರಸ ಸಂಸ್ಥೆಗಳು ಒಂದು ವಾರ ತ್ರಿವರ್ಣ ದ್ವಜಾರೋಹಣ ಮಾಡುವ ಮೂಲಕ ಆಚರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರು ಸರಕಾರದ ಪರವಾಗಿ ಆದೇಶಿಸುತ್ತಾರೆ.
ವಿಪರ್ಯಾಸ ಎಂದರೆ ಬಿ.ಜೆ.ಪಿ ಆಡಳಿತವಿರುವ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಈ ವರ್ಷದ ಸ್ವಾತಂತ್ರ್ಯದ ರಜೆಯನ್ನೇ ರದ್ದುಗೊಳಿಸಿದೆ.
ಈ ದೇಶದ ಸ್ವಾತಂತ್ರ್ಯ ಗಳಿಕೆಗಾಗಿ ಈ ದೇಶದ ಮುಸ್ಲಿಮರು, ಇತರ ಸಮುದಾಯದ ಹೋರಾಟಗಾರ ರೊಂದಿಗೆ , ತಮ್ಮ ಜೀವದ ಹಂಗು ತೊರೆದು ಹೋರಾಡಿ ಪ್ರಾಣವನ್ನೇ ಅರ್ಪಿಸಿ ಭಾರತದ ಸ್ವಾತಂತ್ರ್ಯವನ್ನು ಗಳಿಸಲಾಗಿದೆ.
ಈ ದೇಶದಲ್ಲಿ ಮುಸ್ಲಿಮರು ಹುಟ್ಟಿನಿಂದಲೇ ನಾಡ ಪ್ರೇಮಿಗಳು ಹುಟ್ಟಿದ ಮಣ್ಣಿಗೆ ಗೌರವ ನೀಡುವ ವಿದ್ಯೆಯನ್ನು ಪ್ರತಿಯೊಬ್ಬ ಮುಸ್ಲಿಮನು ಮದರಸದಿಂದಲೇ ಕಲಿಯುತ್ತಾನೆ. ಈ ದೇಶದ, ಮಣ್ಣಿನ ರಕ್ಷಣೆಯು ಮುಸ್ಲಿಮರ ಜೀವನದ, ಧರ್ಮದ ಭಾಗವಾಗಿದೆ.ಇಸ್ಲಾಮ್ ಅದನ್ನೇ ಕಲಿಸುತ್ತದೆ.ಈ ಬಗ್ಗೆ ಯಾರಿಗೂ ಸಂಶಯ ಬೇಡ ಈ ದೇಶದ ಪ್ರತಿಯೊಬ್ಬ ಮುಸ್ಲಿಮರು ದೇಶಪ್ರೇಮಿಗಳು.
ಅನಾದಿ ಕಾಲದಿಂದಲೂ ಈ ದೇಶದ ಸಂಸ್ಕೃತಿ, ಸಂಕೇತ, ದ್ವಜಗಳಿಗೆ ಮುಸ್ಲಿಮರು ಗೌರವ ಪಾಲನೆ ಗೊಳಿಸುತ್ತಾ ಬಂದಿರುತ್ತಾರೆ. ಮುಂದೆಯು ಗೌರವ ಸಲ್ಲಿಸಲಿದ್ದಾರೆ. ಈ ದೇಶದ ಪ್ರತಿ ಮದರಸ , ಧಾರ್ಮಿಕ ಸಂಸ್ಥೆಗಳಲ್ಲಿ ಅದೆಷ್ಟೋ ವರ್ಷಗಳಿಂದ ಈ ದೇಶದ ತ್ರಿವರ್ಣ ದ್ವಜ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಆರೋಹಣ ಗೊಳ್ಳುತ್ತಿದೆ. ಈ ಬಗ್ಗೆ ಸರಕಾರ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ.
ಈ ದೇಶದ ಧಾರ್ಮಿಕ ಸಂಸ್ಥೆ, ಮದರಸ ಮಾತ್ರವಲ್ಲದೆ, ಪ್ರತಿ ಮುಸ್ಲಿಮ್ ಮೊಹಲ್ಲಾಗಳ ಪ್ರತಿ ಸೇವಾ ಸಂಘಟನೆಗಳು, ರಾಷ್ಟ್ರ ದ್ವಜವನ್ನು ಅತ್ಯಂತ ಗೌರವ ಪೂರಕವಾಗಿ ಹಾರಾಟ ನಡೆಸುತ್ತಿದೆ, ಇನ್ನೂ ನಡೆಸಲಿದೆ. ಆದರೆ ಇಲ್ಲಿ ಗೊಂದಲ ಇರುವುದು, ಸ್ವಾತಂತ್ರ್ಯ ದಿನದಂದು ಆರ್. ಎಸ್. ಎಸ್. ಶಾಖೆಗಳಲ್ಲಿ ಈ ದೇಶದ ಸ್ವಾತಂತ್ರ್ಯ ದ ಸಂಕೇತವಾಗಿರುವ ತ್ರಿವರ್ಣ ದ್ವಜ ಹಾರಿಸಲು ಸಚಿವರಾದ ನಾಗೇಶ್ ಜೀ ರವರು ತನ್ನ ಸಂಘ ಸಹಪಾಠಿಗಳಿಗೆ ಸೂಚನೆ ನೀಡಬೇಕಿದೆ.
ಮುಂದುವರಿದು, ತನ್ನ ಆರ್. ಎಸ್. ಎಸ್. ಶಾಖೆಗೆ ಸಲಹೆ ನೀಡಿ, ಸರಕಾರಿ ಶಿಕ್ಷಣ ಸಂಸ್ಥೆಗಳ ದ್ವಜ ಸ್ತಂಭಗಳಲ್ಲಿ ಭಗವಾ ದ್ವಜ ಹಾರಾಟ ಮಾಡುವಂತಹ ದುಷ್ಕೃತ್ಯಕ್ಕೆ ಕೈ ಹಾಕದಂತೆ ಮುಂಜಾಗ್ರತೆ ವಹಿಸ ಬೇಕಿದೆ.
ಇಲ್ಲಿ ಮುಸ್ಲಿಮರ ಮದರಸಾಗಳಲ್ಲಿ ದ್ವಜಾರೋಹಣ ಮಾಡಬೇಕೆಂದು ಆದೇಶ ನೀಡುವ ಶಿಕ್ಷಣ ಸಚಿವರು ತಮ್ಮ ಸಂಘದ ರಾಷ್ಟ್ರ ಪ್ರೇಮವನ್ನು ಪ್ರದರ್ಶಿಸಲು ತಯಾರಾಗಲಿ. ಈ ದೇಶದ ಮುಸ್ಲಿಮರು ಈ ಮಣ್ಣಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ , ಮುಂದಿನ ಸ್ವಾತಂತ್ರ್ಯಾ ದಿನಾಚರಣೆ ಈ ದೇಶದ ಮುಸ್ಲಿಮರ ದೇಶಪ್ರೇಮವನ್ನು ಅಧಿಕ ಗೊಳಿಸಲಿದೆ.
ಕೆ.ಅಶ್ರಫ್.
ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ