janadhvani

Kannada Online News Paper

ಮದ್ರಸ ವಿದ್ಯಾರ್ಥಿಯ ಮೇಲಿನ ಹಲ್ಲೆ : ಎಸ್.ಜೆ.ಎಂ.ಬಜ್ಪೆ ರೇಂಜ್ ಖಂಡನೆ

ಸುರತ್ಕಲ್ : ಕಳೆದ ರಾತ್ರಿ ಕೃಷ್ಣಾಪುರ 6ನೇ ಬ್ಲಾಕ್ ಮದ್ರಸದ ಆರನೇ ತರಗತಿಯ ವಿದ್ಯಾರ್ಥಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಇದನ್ನು ಎಸ್.ಜೆ.ಎಂ.ಬಜ್ಪೆ ರೇಂಜ್ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ವಿದ್ಯೆ ಕಲಿಯುವ ಪುಟಾಣಿಗಳನ್ನು ಗುರಿಯಾಗಿಸಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಹೇಯಕೃತ್ಯಗಳ ಮೂಲಕ ಸಮಾಜವನ್ನು ಒಡೆಯುವ ಹಾಗೂ ಕ್ಷೋಭೆಯನ್ನುಂಟು ಮಾಡುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ನಾವು ಒತ್ತಾಯಿಸುತ್ತಿದ್ದೇವೆ. ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಅಭಧ್ರತಾ ಭಾವನೆ ಮೂಡದಂತೆ ಪೊಲೀಸ್ ಇಲಾಖೆಯು ಎಚ್ಚರವಹಿಸಬೇಕು ಹಾಗೂ ಮುಂದೆ ಇಂತಹ ಪ್ರಕರಣಗಳು ಮರುಕಳಿಸದಿರಲು ಈ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಪೊಲೀಸ್ ಇಲಾಖೆಯೊಂದಿಗೆ ನಾವು ಮನವಿ ಮಾಡುತ್ತಿದ್ದೇವೆ.

ಅಧ್ಯಕ್ಷರು ಹಾಗೂ ಸದಸ್ಯರು
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್
ಬಜ್ಪೆ ರೇಂಜ್

error: Content is protected !! Not allowed copy content from janadhvani.com