ಬೆಂಗಳೂರು: ತನ್ನ ವಾಟ್ಸಾಪ್ ಕಾಂಟಾಕ್ಟ್ ನಲ್ಲಿರುವ ಸ್ನೇಹಿತರಲ್ಲಿ ಕಷ್ಟ ಕಥೆಗಳನ್ನು ಹೇಳಿ ಹಣ ಲಪಟಾಯಿಸುತ್ತಿರುವ ವಂಚಕನ ಬಗ್ಗೆ ಎಚ್ಚರಿಕೆ.
ಈತ ಆತೀಫ್ ರಹ್ಮಾನ್ ಎಂಬ ಹೆಸರಿನಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಹೊಂದಿದ್ದಾನೆ. ತಾನು ವಿದೇಶಕ್ಕೆ ತೆರಳುತ್ತಿದ್ದೇನೆ, ಆದರೆ ಇಮಿಗ್ರೇಷನ್ ತೊಂದರೆಯಿಂದಾಗಿ ಸಿಲುಕಿದ್ದೇನೆ. ವಿದೇಶದಿಂದ ಹಣ ಕಳಿಸಿದ್ರೆ ಇಮಿಗ್ರೇಷನ್ ಕ್ಲಿಯರ್ ಆಗುತ್ತೆ ಆ ಹಣವನ್ನು ನಿಮ್ಮ ಊರಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇನೆ ಎಂದು ನಂಬಿಸಿ ಮುಗ್ದರನ್ನು ವಂಚಿಸಿ ಹಣ ಲಪಟಾಯಿಸುತ್ತಾನೆ.
ಆತಿಫ್ ಎಂಬ ವ್ಯಕ್ತಿಯ ಸಿಮ್, ಆಧಾರ್ ಮತ್ತು ಪಾನ್ ಕಾರ್ಡ್ ನ್ನು ಈತ ಲಪಟಾಯಿಸಿ ವಂಚಿಸುತ್ತಿರುವುದಾಗಿ ಸಂದೇಹ ಉಂಟಾಗಿದೆ. ಈತನೊಂದಿಗೆ ಬ್ಯಾಂಕ್ ಉದ್ಯೋಗಸ್ಥರು ಶಾಮೀಲಾಗಿರುವ ಬಗ್ಗೆ ಸಂಶಯ ಉದ್ಭವಿಸಿದೆ.
ವಿದೇಶದಿಂದ ಕಳಿಸುಕೊಡುವ ಮೊತ್ತವನ್ನು ಈತ ಊರಿನಲ್ಲಿರುವ ತಮ್ಮ ಬ್ಯಾಂಕ್ ಎಕೌಂಟ್ ಗೆ ವರ್ಗಾಯಿಸಿದ್ದಾಗಿ ಬ್ಯಾಂಕ್ ಡಿಪೋಸಿಟ್ ಮಾಡಿ ಮೊಹರು ಹಾಕಿರುವ ರಶೀದಿಯನ್ನು ನೀಡುತ್ತಾನೆ. ಆದರೆ, ಅದು ನಕಲಿಯಾಗಿರುತ್ತದೆ.
ಈ ರೀತಿ ಬೇರೆ ಬೇರೆ ಶೈಲಿಯಲ್ಲಿ ಮುಗ್ದರನ್ನು ವಂಚಿಸುತ್ತಿರುವ ಈತನನ್ನು ಕೂಡಲೇ ಬಂಧಿಸಿ, ಕಾನೂನಿನ ಮುಂದೆ ತರಬೇಕಾಗಿದೆ. ಈಗಾಗಲೇ ಹಲವು ಮಂದಿಗೆ ಪಂಗನಾಮ ಹಾಕಿರುವ ಈತನ ವಂಚನೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.
















ಇನ್ನಷ್ಟು ಸುದ್ದಿಗಳು
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ