ಬೆಂಗಳೂರು: ತನ್ನ ವಾಟ್ಸಾಪ್ ಕಾಂಟಾಕ್ಟ್ ನಲ್ಲಿರುವ ಸ್ನೇಹಿತರಲ್ಲಿ ಕಷ್ಟ ಕಥೆಗಳನ್ನು ಹೇಳಿ ಹಣ ಲಪಟಾಯಿಸುತ್ತಿರುವ ವಂಚಕನ ಬಗ್ಗೆ ಎಚ್ಚರಿಕೆ.
ಈತ ಆತೀಫ್ ರಹ್ಮಾನ್ ಎಂಬ ಹೆಸರಿನಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಹೊಂದಿದ್ದಾನೆ. ತಾನು ವಿದೇಶಕ್ಕೆ ತೆರಳುತ್ತಿದ್ದೇನೆ, ಆದರೆ ಇಮಿಗ್ರೇಷನ್ ತೊಂದರೆಯಿಂದಾಗಿ ಸಿಲುಕಿದ್ದೇನೆ. ವಿದೇಶದಿಂದ ಹಣ ಕಳಿಸಿದ್ರೆ ಇಮಿಗ್ರೇಷನ್ ಕ್ಲಿಯರ್ ಆಗುತ್ತೆ ಆ ಹಣವನ್ನು ನಿಮ್ಮ ಊರಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇನೆ ಎಂದು ನಂಬಿಸಿ ಮುಗ್ದರನ್ನು ವಂಚಿಸಿ ಹಣ ಲಪಟಾಯಿಸುತ್ತಾನೆ.
ಆತಿಫ್ ಎಂಬ ವ್ಯಕ್ತಿಯ ಸಿಮ್, ಆಧಾರ್ ಮತ್ತು ಪಾನ್ ಕಾರ್ಡ್ ನ್ನು ಈತ ಲಪಟಾಯಿಸಿ ವಂಚಿಸುತ್ತಿರುವುದಾಗಿ ಸಂದೇಹ ಉಂಟಾಗಿದೆ. ಈತನೊಂದಿಗೆ ಬ್ಯಾಂಕ್ ಉದ್ಯೋಗಸ್ಥರು ಶಾಮೀಲಾಗಿರುವ ಬಗ್ಗೆ ಸಂಶಯ ಉದ್ಭವಿಸಿದೆ.
ವಿದೇಶದಿಂದ ಕಳಿಸುಕೊಡುವ ಮೊತ್ತವನ್ನು ಈತ ಊರಿನಲ್ಲಿರುವ ತಮ್ಮ ಬ್ಯಾಂಕ್ ಎಕೌಂಟ್ ಗೆ ವರ್ಗಾಯಿಸಿದ್ದಾಗಿ ಬ್ಯಾಂಕ್ ಡಿಪೋಸಿಟ್ ಮಾಡಿ ಮೊಹರು ಹಾಕಿರುವ ರಶೀದಿಯನ್ನು ನೀಡುತ್ತಾನೆ. ಆದರೆ, ಅದು ನಕಲಿಯಾಗಿರುತ್ತದೆ.
ಈ ರೀತಿ ಬೇರೆ ಬೇರೆ ಶೈಲಿಯಲ್ಲಿ ಮುಗ್ದರನ್ನು ವಂಚಿಸುತ್ತಿರುವ ಈತನನ್ನು ಕೂಡಲೇ ಬಂಧಿಸಿ, ಕಾನೂನಿನ ಮುಂದೆ ತರಬೇಕಾಗಿದೆ. ಈಗಾಗಲೇ ಹಲವು ಮಂದಿಗೆ ಪಂಗನಾಮ ಹಾಕಿರುವ ಈತನ ವಂಚನೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.
















ಇನ್ನಷ್ಟು ಸುದ್ದಿಗಳು
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ