ಮಂಜನಾಡಿ: ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಮೊಂಟುಗೋಳಿ ರೇಂಜ್ ಇದರ ವಾರ್ಷಿಕ ಮಹಾಸಭೆ ಬಹು ಮುಹ್ಯದ್ದೀನ್ ಸಅದಿ ತೋಟಾಲ್ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ರೇಂಜ್ ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲೀಯಾರ್ ರವರು ಸ್ವಾಗತಿಸಿದ ಸಭೆಯನ್ನು ಸುನ್ನಿ ವಿದ್ಯಾಭ್ಯಾಸ ಶಿಕ್ಷಣ ಮಂಡಳಿ ಮುಫತ್ತಿಶರಾದ ಬಹು ಅಬ್ದುಲ್ ಹಮೀದ್ ಮದನಿ ಬೊಳ್ಮಾರ್ ಉದ್ಘಾಟಿಸಿದರು. ಅಲ್ ಮದೀನಾ ವಿಧ್ಯಾ ಸಂಸ್ಥೆಯ ಜ.ಮೇನಜರ್ ಅಬ್ದುಲ್ ಖಾದರ್ ಸಖಾಫಿ ಶುಭಾಶಂಸನೆ ಗೈದರು
ರಿಟೈನಿಂಗ್ ಆಫೀಸರ್ ಇಸ್ಮಾಯಿಲ್ ಸಅದಿ ಉರುಮಣೆ ರವರ ನೇತೃತ್ವದಲ್ಲಿ 2022-25 ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿದ್ದೀಕ್ ಸಅದಿ ಮೊಂಟೆಪದವು,ಪ್ರ.ಕಾರ್ಯಾದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಅಲ್ ಮದೀನಾ,ಕೋಶಾಧಿಕಾರಿ ಮುಹ್ಯುದ್ದೀನ್ ಸಅದಿ ತೋಟಾಲ್.
ಉಪಾಧ್ಯಕ್ಷರು: ಪರೀಕ್ಷೆ,ಐಟಿ, ವೆಲ್ಫೇರ್ ವಿಭಾಗ: ಹಮೀದ್ ಮದನಿ ಮೊಂಟೆಪದವು.ಕಾರ್ಯದರ್ಶಿ: ನಾಸಿರ್ ಮದನಿ ಪಡಿಕ್ಕಲ್
ಉಪಾಧ್ಯಕ್ಷರು: ಮ್ಯಾಗಝಿನ್ ವಿಭಾಗ : ಹನೀಫ್ ಲತೀಫಿ ಪೊಟ್ಟಳಿಕೆ.ಕಾರ್ಯದರ್ಶಿ:ಆಬಿದ್ ಸಖಾಫಿ ಮರಿಕ್ಕಳ
ಉಪಾಧ್ಯಕ್ಷರು: ಟ್ರೆನಿಂಗ್ ಮತ್ತು ಮಿಶನರಿ ವಿಭಾಗ : ಅಬೂಬಕ್ಕರ್ ಸಅದಿ ಮೊಂಟುಗೋಳಿ.ಕಾರ್ಯದರ್ಶಿ: ಅನ್ಸಾರ್ ಸಅದಿ ಇವರನ್ನು ಆಯ್ಕೆ ಮಾಡಲಾಯಿತು.
ಹಜ್ಜ್ ಯಾತ್ರೆ ಹೊರಡಲಿರುವ ರೇಂಜ್ ನಿಕಟ ಪೂರ್ವ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್ ರವರನ್ನು ರೇಂಜ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಕೊನೆಗೆ ನೂತನ ಪ್ರ.ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ವಂದಿಸಿದರು.