✍️ ಅಶ್ರಫ್ ಕಿನಾರ ಮಂಗಳೂರು
ಭೂಮಿಯ ಚಲನೆಯಿಂದಾಗಿ ಹಗಲು ರಾತ್ರಿ ಹಾಗೂ ವೇಳೆಗಳಲ್ಲಿ ಗೋಳಾದ್ಯಂತ ವ್ಯತ್ಯಾಸ ಇರುವುದರಿಂದ ಆಝಾನ್ ಎನ್ನುವುದು ಜಗತ್ತಿನಾದ್ಯಂತ ದಿನದ 24 ಗಂಟೆಗಳಲ್ಲೂ ನಡೆಯುತ್ತಿದೆ. ಅದರ ಅರ್ಥ ದಯವಿಟ್ಟು ಗೂಗಲ್ ನಲ್ಲಿ ಸರ್ಚ್ ಮಾಡಿ ಕಳಿತುಕೊಳ್ಳಿ ಎಲ್ಲಾ ಬಾಷೆಯಲ್ಲೂ ಇದೆ.
ಒಂದು ಸಮಯದ ಅಝಾನ್ ಗೆ ಬೇಕಾದುದು ಗರಿಷ್ಠ ಎಂದರೆ ಐದಾರು ನಿಮಿಷ. ಒಂದು ಪ್ರದೇಶದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಟ್ಟು ಐದು ಬಾರಿ ಅಝಾನ್ ಕರೆ ಕೊಡಲಾಗುತ್ತದೆ. ಇಡೀ ದಿನದಲ್ಲಿ ಇಪ್ಪತ್ತು-ಮುವತ್ತು ನಿಮಿಷಗಳಷ್ಟೆ ಬೇಕಾದ ಗರಿಷ್ಠ ಸಮಯ. ಅದೂ ಒಂದೇ ಬಾರಿಗೆ ಅಲ್ಲ.
ಆಝಾನ್ ಗೆ ಧ್ವನಿವರ್ಧಕ ಬಳಸಬಾರದೆಂದು ಸರಕಾರ ಸುತ್ತೋಲೆ ಹೊರಡಿಸಿದರೂ ಮುಸ್ಲಿಮರು ಹಿಂದಿನಂತೆಯೇ ಮುಂದುವರಿಯಬಲ್ಲರು. ಯಾಕೆಂದರೆ ಇಸ್ಲಾಮಿನಲ್ಲಿ ಅಂತಹದ್ದಕ್ಕೆಲ್ಲಾ ಪರ್ಯಾಯಗಳಿವೆ.
ಆದರೆ ನಮ್ಮ ಕರಾವಳಿ ಜಿಲ್ಲೆಯ ಯಕ್ಷಗಾನ ಬಯಲಾಟದಂತಹ ಕಲೆಯಲ್ಲಿ ವೃತ್ತಿಪರರಾಗಿ ದುಡಿಯುವ ನೂರಾರು ಕಲಾವಿದರಿದ್ದಾರೆ. ಅಂತಹ ಕಲಾವಿದರ ಜೀವನೋಪಾಯದ ಮೇಲೆ ಧ್ವನಿವರ್ಧಕ ನಿರ್ಬಂಧವು ನೇರವಾಗಿ ಹೊಡೆತ ನೀಡುತ್ತದೆ. ರಾತ್ರಿ ಇಡೀ ನಡೆಯುವ ಯಕ್ಷಗಾನ ಬಯಲಾಟ,ಕೋಲ,ನೇಮ, ಸಾಂಸ್ಕೃತಿಕ ವಿವಿಧ ಕಾರ್ಯಗಳು ಇನ್ನು ಮುಂದೆ ಸ್ಥಗಿತಗೊಳಿಸಬೇಕಾದ ಸ್ಥಿತಿ ಬರಲಿದೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಸಿಡಿಸುವ ಮದ್ದುಗುಂಡುಗಳ ಶಬ್ದಗಳೆಲ್ಲವೂ ನಿಲ್ಲಿಸಬೇಕಾಗುತ್ತದೆ.
ಆಡಳಿತ ಪಕ್ಷದೊಂದಿಗೆ ನಿಷ್ಠೆ ಹೊಂದಿದವರೇ ಈಗ ಮುತಾಲಿಕ್ ಬಗ್ಗೆ ಬಾಯಿಗೆ ಬಂದಂತೆ ಗೇಲಿ ಮಾಡತೊಡಗಿದ್ದಾರೆ.
ಇಲ್ಲಿನ ಮುಸ್ಲಿಂ ಸಮುದಾಯಕ್ಕೆ ಹಿಂದು ಸಹೋದರ ರ ಯಾವುದೇ ಕಾರ್ಯಕ್ರಮದ/ ಪ್ರಾರ್ಥನೆಯ ಶಬ್ದವೂ ಕಿರಿಕ್ ಉಂಟು ಮಾಡಲೇ ಇಲ್ಲ.ಯಾವ ಅಭಿಯಾನವು ಮುಸಲ್ಮಾನ ಶುರು ಮಾಡಿಲ್ಲ. ಇಲ್ಲಿ ಸಮಾಜವೇ ಅರಿತು ಕೊಳ್ಳಬೇಕು. ಯಾರದು ಸರಿ ಯಾರದು ತಪ್ಪು …
ಅಂತೂ ಇಂತೂ ಹಗರಣಗಳ ಮರೆ ಮಾಚಲು ವಿವಾದ ಗಳ ಗುತ್ತಿಗೆ ಪಡೆದ ಮುತಾಲಿಕ್ ಗೆ ಬಿಟ್ಟಿ ಪ್ರಚಾರ ಆಯ್ತು ಅಷ್ಟೆ
















ಇನ್ನಷ್ಟು ಸುದ್ದಿಗಳು
ಶ್ವೇತ ಸಾಗರವಾದ ಅರಫಾ ಮಹಾ ಸಂಗಮ “ಪೈಗಂಬರ್ ﷺ ಅವರ ವಿದಾಯ ಭಾಷಣ
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ