ಮಂಗಳೂರು: ಇತ್ತೀಚೆಗೆ ಆರ್ಯ ಪ್ರಮೋದ್ ಮುತಾಲಿಕ್ ತನ್ನ ಸವರ್ಣೀಯರ ಅಣತಿಯಂತೆ, ಈ ರಾಜ್ಯದ ಸಾಮಾನ್ಯ ಜನರ ಮಧ್ಯೆ ದ್ವೇಷದ ಅಂತರ ಹೆಚ್ಚಿಸಲು, ಸುಳ್ಳಿನ ಹೇಳಿಕೆಯನ್ನು ಮುಂದುವರಿಸುವ ಭರದಲ್ಲಿ ಮುಸ್ಲಿಮರೊಂದಿಗೆ ಆಭರಣದ ವ್ಯವಹಾರ ಮಾಡಬಾರದು ಎಂದು ರಾಗ ಎಳೆದಿದ್ದಾರೆ.ಮತ್ತು ಮುಸ್ಲಿಮರು ಅನ್ಯ ಮತೀಯ ಹುಡುಗಿಯರನ್ನು ಮತಾಂತರಗೊಳಿಸಿದ್ದಾರೆ ಎಂಬಿತ್ಯಾದಿ ಹಸಿ ಹಸಿ ಸುಳ್ಳುಗಳ ಅಪಪ್ರಚಾರ ಮಾಡಿರುತ್ತಾರೆ.
ಈ ದೇಶದ ಆಡಳಿತ ವೈಫಲ್ಯವನ್ನು ಈ ದೇಶದ ರಾಜ್ಯದ ಜನರು ಚರ್ಚಿಸಬಾರದು ಎಂದು ಮುಸ್ಲಿಮರ ವಿರುದ್ದತೆ ಯನ್ನು ವೈಭವೀಕರಿಸ ಲಾಗುತ್ತಿದೆ. ಮುತಾಲಿಕ್ ತಿಳಿಯಲಿ ಇಂತಹ ಮುತಾಲಿಕನ ಅದೆಷ್ಟೋ ‘ ಬ್ಯಾನ್ ‘ ಗಳನ್ನು ಈ ಸಮುದಾಯ ಜೀರ್ಣಿಸಿಕೊಂಡಿದೆ. ಈ ದೇಶದ ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನಾಂಗ, ಮೂಲನಿವಾಸಿಗಳು ವ್ಯತ್ಯಸ್ತ ಅವಧಿಗಳಲ್ಲಿ ಈ ದೇಶದ ಮುಸ್ಲಿಮರೊಂದಿಗೆ ಬಾಳಿ, ಬದುಕಿ ವ್ಯವಹರಿಸಿದವರು.
ವ್ಯವಹಾರ ಎಂಬುದು ವಿವಿಧ ವರ್ಗಗಳ ಮಧ್ಯೆಗಿನ ಒಂದು ಮಹಾ ಕೊಂಡಿ. ಅದು ನಿಸರ್ಗ ನಿಯಮ, ಅದನ್ನು ಸ್ಥಗಿತ ಗೊಳಿಸಲು ಮುತಾಲಿಕ್ ನಂತಹ ಅದೆಷ್ಟೋ ಆರ್ಯರು ಬಂದರೂ ತಡೆಯಲು ಸಾದ್ಯವಿಲ್ಲ. ವ್ಯವಹಾರ ಎಂಬುದು ಈ ನೆಲದ ಮಣ್ಣಿನ ಅವಿಭಾಜ್ಯ ಅಂಗ ಮತ್ತು ಒಂದು ನಿರ್ಧಿಷ್ಟ ವಿನಿಮಯ ವಿಧಾನ. ಕುಟುಂಬ, ಪ್ರಗತಿ, ಸಾಮರಸ್ಯದ ಬಗ್ಗೆ ಎಳ್ಳಷ್ಟೂ ಪರಿಜ್ಞಾನ ಇಲ್ಲದ ಈ ಆರ್ಯ ಮುತಾಲಿಕನಿಗೆ ಏನು ಗೊತ್ತು ನಿಸರ್ಗ ನಿಯಮ.
ಮುತಾಲಿಕ ನಂತಹ ಅದೆಷ್ಟೋ ‘ ಬ್ಯಾನ್ ‘ ಗಳಿಗೆ, ಈ ಸಮುದಾಯದ ಸಮೃದ್ಧಿಯನ್ನು ಕಿಂಚಿತ್ತೂ ಅಲುಗಾಡಿಸಲು ಸಾದ್ಯವಿಲ್ಲ. ಈ ಸಮುದಾಯ ಅದೆಷ್ಟೋ ‘ ಬ್ಯಾನ್ ‘ ಗಳನ್ನೂ ಕಂಡೂ, ಕೇಳಿ, ಜೀರ್ಣಿಸಿ ಅನಭವವಿದೆ. ಮುತಾಲಿಕನಂತಹ ಸಾವಿರ ಆರ್ಯರು ಸ್ವತಃ ಅಥವಾ ತನ್ನ ಗುಲಾಮರಲ್ಲಿ ಹೇಳಿಕೆ ಕೊಡಿಸಿದರೂ ಜನರ ಮಧ್ಯೆ ನಿಸರ್ಗ ಸ್ಥಾಪಿತವಾದ ಕೊಡು ಕೊಳ್ಳುವಿಕೆ ಯನ್ನು ನಿರ್ಭಂಧಿಸಲು ಸಾದ್ಯವಿಲ್ಲ ಎನ್ನುವುದನ್ನು ಅರಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ