ಹೊಸದಿಲ್ಲಿ: ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೇ ಎಂಬ ಪ್ರಶ್ನೆಗೆ “ಅಗತ್ಯತೆಯ ಪರೀಕ್ಷೆ” (ಎಸೆನ್ಶಿಯಾಲಿಟಿ ಟೆಸ್ಟ್) ಎಂಬುದನ್ನು ಸೇರಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಸುಪ್ರೀಂ ಕೋರ್ಟ್ 1954 ಶಿರೂರು ಮಠ ತೀರ್ಪನ್ನು ತಪ್ಪಾಗಿ ಅರ್ಥೈಸಿ ಈ ಎಸೆನ್ಶಿಯಾಲಿಟಿ ಪರೀಕ್ಷೆಯನ್ನು ತಪ್ಪಾಗಿ ಅನ್ವಯಿಸಿದೆ ಎಂದು ಸುಪ್ರೀಂ ಕೋರ್ಟಿನ ಹಿರಿಯ ವಕೀಲ ದುಷ್ಯಂತ್ ದವೆ ಅವರು Thewire.in ನಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ರೊಂದಿಗೆ ನಡೆಸಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರೂ ಆಗಿರುವ ದವೆ ಅವರು ಮಾತನಾಡುತ್ತಾ “1954 ತೀರ್ಪು ಧರ್ಮದ ವ್ಯಾಖ್ಯಾನವನ್ನು ವಿಶಾಲವಾಗಿ ಹಾಗೂ ಧರ್ಮದ ಅನುಯಾಯಿಗಳು ತಮ್ಮ ಧರ್ಮಕ್ಕೆ ಅಗತ್ಯವೆಂದು ನಂಬುವ ವಿವಿಧ ರೀತಿಯ ಆಹಾರ ಮತ್ತು ಉಡುಗೆತೊಡುಗೆ ಸೇರಿದಂತೆ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಹಿಜಾಬ್ ತಮ್ಮ ಧರ್ಮದ ಅವಿಭಾಜ್ಯ ಅಂಗವೆಂದು ಮುಸ್ಲಿಂ ಬಾಲಕಿಯರು ಹೇಳಿದರೆ ಅದು ಹಾಗೆಯೇ ಆಗಿದೆ. 1954ರ ತೀರ್ಪಿನಲ್ಲಿ ಧರ್ಮದ ವ್ಯಾಖ್ಯಾನವು ಹಿಜಾಬ್ ವಿಚಾರಕ್ಕೂ ಅನ್ವಯಿಸುತ್ತದೆ,” ಎಂದು ಅವರು ಹೇಳಿದರು.
ಸಂದರ್ಶನದ ವೇಳೆ ದವೆ ಅವರು ಸುಪ್ರೀಂ ಕೋರ್ಟಿನ 1954 ಶಿರೂರು ಮಠ ತೀರ್ಪಿನಲ್ಲಿ ಧರ್ಮದ ಕುರಿತ ವ್ಯಾಖ್ಯಾನವನ್ನು ಓದಿ ಹೇಳಿದ್ದಾರೆ.
“ಧರ್ಮ ಎಂಬುದು ಕೇವಲ ಒಂದು ಸಿದ್ಧಾಂತ ಅಥವಾ ನಂಬಿಕೆ ಎಂದು ಹೇಳುವುದು ಸರಿಯಾಗದು. ಒಂದು ಧರ್ಮವು ತನ್ನ ಅನುಯಾಯಿಗಳಿಗೆ ಪಾಲಿಸಲು ಒಂದು ನೈತಿಕ ನೀತಿಗಳ ಸಂಹಿತೆಯನ್ನಷ್ಟೇ ಅಲ್ಲ ಅದು ಧರ್ಮದ ಅವಿಭಾಜ್ಯ ಅಂಗಗಳೆಂದು ತಿಳಿಯಲಾದ ಕೆಲವೊಂದು ಆಚರಣೆಗಳು, ಸಮಾರಂಭಗಳು, ಆರಾಧನೆಯ ವಿಧಾನಗಳನ್ನೂ ತಿಳಿಸಬಹುದು ಮತ್ತು ಈ ಆಚರಣೆಗಳು ಆಹಾರ ಮತ್ತು ಉಡುಗೆತೊಡುಗೆಯ ವಿಚಾರಗಳಿಗೂ ವಿಸ್ತರಿಸಬಹುದು’ ಎಂದು 1954 ತೀರ್ಪಿನ ಭಾಗವನ್ನು ದವೆ ಓದಿ ಹೇಳಿದ್ದಾರೆ.
1954 ತೀರ್ಪಿನಲ್ಲಿನ ಅಗತ್ಯತೆಯ ವಿಚಾರವನ್ನು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅನ್ವಯಿಸಿದ್ದರೆ ಅದು ಆ ತೀರ್ಪಿನಲ್ಲಿನ ಧರ್ಮದ ವ್ಯಾಖ್ಯಾನವನ್ನೂ ಅನ್ವಯಿಸಬೇಕಿತ್ತು. 1954 ತೀರ್ಪಿನ ನಂತರದ 70 ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಧರ್ಮದ ಕುರಿತಾದ ಅದರಲ್ಲಿನ ವ್ಯಾಖ್ಯಾನವನ್ನು ಸತತವಾಗಿ ಒಪ್ಪಿದೆ ಎಂದು ದವೆ ಹೇಳಿದ್ದಾರೆ.
ತಮ್ಮ ವಾದಕ್ಕೆ ಪೂರಕವಾಗಿ ಅವರು ಇನ್ನೊಂದು ಮಾತನ್ನೂ ಹೇಳಿದ್ದಾರೆ. “ಜಾತ್ಯತೀತ ಭಾರತದಲ್ಲಿ ಮುಖ್ಯಮಂತ್ರಿಯೊಬ್ಬರು (ಆದಿತ್ಯನಾಥ್) ತಮ್ಮ ಅಧಿಕೃತ ಸರಕಾರಿ ಕಚೇರಿಯಲ್ಲಿ ಕೇಸರಿ ವಸ್ತ್ರ ಧರಿಸಬಹುದಾದರೆ, ಮುಸ್ಲಿಂ ಬಾಲಕಿಯರು ಶಾಲೆಗಳಿಗೇಕೆ ಹಿಜಾಬ್ ಧರಿಸಬಾರದು,” ಎಂದು ದವೆ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ