ಹಿಜಾಬ್ ವಿಷಯದಲ್ಲಿ ಇಂದು ನೀಡಿದ ತೀರ್ಪಿನಲ್ಲಿ ದು:ಖವಿದೆ.
ಆದರೂ ಕಾನೂನನ್ನು ಗೌರವಿಸಿ ತೀರ್ಪಿಗೆ ಮೌನಿಯಾಗಿದ್ದೇವೆ.
ಮೇಲ್ಮನವಿ ಮೂಲಕ ಮುಂದುವರಿದು ಕಾನೂನಾತ್ಮಕವಾಗಿ ನ್ಯಾಯ ತಂದುಕೊಡಲಿದ್ದೇವೆ ಎಂದು SKSSF ನಾಯಕ ಇಕ್ಬಾಲ್ ಬಾಳಿಲ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ತೀರ್ಪು ನೀಡಿ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿರುವುದು ಸಂವಿಧಾನ ವಿರೋಧ ಹೇಳಿಕೆಯಾಗಿರುತ್ತದೆ.
ಮತ್ತು ಹೀಗೆ ಹೇಳಲು ಕಾರಣವನ್ನು ಹೈಕೋರ್ಟ್ ಸಮಾಜದ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ.
ಶಿರವಸ್ತ್ರ ಧರಿಸುವುದು ಇಸ್ಲಾಮಿನ ಮೂಲಭೂತ ಹಕ್ಕುಗಳಾಗಿರುತ್ತದೆ. ಹಾಗೂ ಕಡ್ಡಾಯ ಕೂಡಾ ಆಗಿರುತ್ತದೆ.
ಈ ಬಗ್ಗೆ ಪರಿಶುದ್ದ ಖುರ್ಆನಿನಲ್ಲೇ ಉಲ್ಲೇಖ ಇರುವಾಗ ನ್ಯಾಯಲಯವು ಅವಿಭಾಜ್ಯ ಅಂಗವಲ್ಲ ಎಂದು ಹೇಳಲು ಕಾರಣವೇನು.?
ನಾಳೆ ಹೀಗೆ ಮುಂದುವರಿದು ಎಲ್ಲಿಯೂ ಹಿಜಾಬ್ ಧರಿಸಬಾರದು ಎಂದು ಹೇಳಿದರೂ ಅಚ್ಚರಿಪಡಬೇಕಾಗಿಲ್ಲ.
ಈ ಕುರಿತು ಸಮುದಾಯದ ಉಲಮಾ ಉಮರಾ ನಾಯಕರು ಒಗ್ಗಟ್ಟಾಗಿ ನಿಂತು ನ್ಯಾಯ ಒದಗಿಸಲು ಮುಂದಾಗಬೇಕಿದೆ.
ಪ್ರಬುದ್ದತೆಯಿಂದ ಎದುರಿಸಿ ಸಂವಿದಾನವನ್ನು ಉಳಿಸಲು ಪ್ರತಿಜ್ಞರಾಗಬೇಕಿದೆ ಎಂದು SKSSF ಟ್ರೆಂಡ್ ರಾಜ್ಯ ನಾಯಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.
ಇದು ಸಂವಿಧಾನ ವಿರುದ್ದದ ಹೇಳಿಕೆಯಾಗಿವೆ
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)