ಹಿಜಾಬ್ ವಿಷಯದಲ್ಲಿ ಇಂದು ನೀಡಿದ ತೀರ್ಪಿನಲ್ಲಿ ದು:ಖವಿದೆ.
ಆದರೂ ಕಾನೂನನ್ನು ಗೌರವಿಸಿ ತೀರ್ಪಿಗೆ ಮೌನಿಯಾಗಿದ್ದೇವೆ.
ಮೇಲ್ಮನವಿ ಮೂಲಕ ಮುಂದುವರಿದು ಕಾನೂನಾತ್ಮಕವಾಗಿ ನ್ಯಾಯ ತಂದುಕೊಡಲಿದ್ದೇವೆ ಎಂದು SKSSF ನಾಯಕ ಇಕ್ಬಾಲ್ ಬಾಳಿಲ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ತೀರ್ಪು ನೀಡಿ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿರುವುದು ಸಂವಿಧಾನ ವಿರೋಧ ಹೇಳಿಕೆಯಾಗಿರುತ್ತದೆ.
ಮತ್ತು ಹೀಗೆ ಹೇಳಲು ಕಾರಣವನ್ನು ಹೈಕೋರ್ಟ್ ಸಮಾಜದ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ.
ಶಿರವಸ್ತ್ರ ಧರಿಸುವುದು ಇಸ್ಲಾಮಿನ ಮೂಲಭೂತ ಹಕ್ಕುಗಳಾಗಿರುತ್ತದೆ. ಹಾಗೂ ಕಡ್ಡಾಯ ಕೂಡಾ ಆಗಿರುತ್ತದೆ.
ಈ ಬಗ್ಗೆ ಪರಿಶುದ್ದ ಖುರ್ಆನಿನಲ್ಲೇ ಉಲ್ಲೇಖ ಇರುವಾಗ ನ್ಯಾಯಲಯವು ಅವಿಭಾಜ್ಯ ಅಂಗವಲ್ಲ ಎಂದು ಹೇಳಲು ಕಾರಣವೇನು.?
ನಾಳೆ ಹೀಗೆ ಮುಂದುವರಿದು ಎಲ್ಲಿಯೂ ಹಿಜಾಬ್ ಧರಿಸಬಾರದು ಎಂದು ಹೇಳಿದರೂ ಅಚ್ಚರಿಪಡಬೇಕಾಗಿಲ್ಲ.
ಈ ಕುರಿತು ಸಮುದಾಯದ ಉಲಮಾ ಉಮರಾ ನಾಯಕರು ಒಗ್ಗಟ್ಟಾಗಿ ನಿಂತು ನ್ಯಾಯ ಒದಗಿಸಲು ಮುಂದಾಗಬೇಕಿದೆ.
ಪ್ರಬುದ್ದತೆಯಿಂದ ಎದುರಿಸಿ ಸಂವಿದಾನವನ್ನು ಉಳಿಸಲು ಪ್ರತಿಜ್ಞರಾಗಬೇಕಿದೆ ಎಂದು SKSSF ಟ್ರೆಂಡ್ ರಾಜ್ಯ ನಾಯಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.
ಇದು ಸಂವಿಧಾನ ವಿರುದ್ದದ ಹೇಳಿಕೆಯಾಗಿವೆ
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ