ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ವತಿಯಿಂದ ಇಂದು ಸಂಜೆ 4 30 ಗೆ ಸರಿಯಾಗಿ ಆನ್ಲೈನ್ ಮೂಲಕ ರಾಜ್ಯದಾದ್ಯಂತ ಮುತಅಲ್ಲಿಮರಿಗೆ ಈಜಿಪ್ಟ್ ನ ಅಲ್ ಅಝ್ಹರ್ ನ ರೌಲತುಲ್ ನಈಮ್ ಮುದರ್ರಿಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿದ್ವಾಂಸ ಶೈಖ್ ಅಹ್ಮದ್ ಅಝ್ಹರಿ ಯವರಿಂದ ಒಳಿತಿನೆಡೆಗೆ ಸಾಗಲು ಆಧುನಿಕ ದಅವಾದ ಅನಿವಾರ್ಯತೆ ಎಂಬ ವಿಷಯದಲ್ಲಿ ಸೆಮಿನಾರ್ ನಡೆಯಿತು.
ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೋಶಾಧಿಕಾರಿ ಹಾಫಿಜ್ ಸುಫ್ಯಾನ್ ಸಖಾಫಿ ಉದ್ಘಾಟನೆ ಮಾಡಿದರು.ರಾಜ್ಯ ದಅವಾ ಸಿಂಡಿಕೇಟ್ ಸದಸ್ಯ ಹಬೀಬ್ ನೂರಾನಿ ಅಸ್ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಉಪಸ್ಥಿತರಿದ್ದರು.
ರಾಜ್ಯ ದಅವಾ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಸ್ವಾಗತಿಸಿ ದಅವಾ ಕನ್ವೀನರ್ ಯಾಸೀನ್ ಸಖಾಫಿ ವಂದಿಸಿದರು.