ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರ ಅಂತ್ಯಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ. ಉಕ್ರೇನ್ ದೇಶದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಷ್ಯಾ ಗಡಿಯಲ್ಲಿ ಇರುವ ಬೆಲಾರಸ್ ಪ್ರಾಂತ್ಯ ತಲುಪಿದ್ದು, ಗಡಿ ಭಾಗದಲ್ಲೇ ರಷ್ಯಾ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಆರಂಭಿಸಿದೆ.
ಕದನ ವಿರಾಮ ಘೋಷಣೆ ಆಗುವಂತೆ ನೋಡಿಕೊಳ್ಳುವುದು, ರಷ್ಯಾ ಸೇನಾ ಪಡೆ ಉಕ್ರೇನ್ ನೆಲದಿಂದ ವಾಪಸ್ ತೆರಳುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಉಕ್ರೇನ್ನ ಅಧ್ಯಕ್ಷೀಯ ಕಚೇರಿ ಮಾಹಿತಿ ನೀಡಿದೆ.
ರಷ್ಯಾ ದೇಶದ ಕಡೆಯಿಂದ ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಅಧ್ಯಕ್ಷೀಯ ಕಚೇರಿಯ ಪ್ರಮುಖ ಸಿಬ್ಬಂದಿ ಈ ಮಾತುಕತೆ ವೇಳೆ ಉಪಸ್ಥಿತರಿರಲಿದ್ದಾರೆ. ಇನ್ನು ಉಕ್ರೇನ್ ಕಡೆಯಿಂದ ಅಧ್ಯಕ್ಷರ ಸಲಹೆಗಾರರು ಹಾಗೂ ರಕ್ಷಣಾ ಸಚಿವರು ಇರಲಿದ್ದಾರೆ.
ಮಾತುಕತೆಗೆ ಹಾಗೂ ಸಂಧಾನಕ್ಕೆ ಮೊದಲಿಗೆ ಬೆಲಾರಸ್ ಪ್ರಾಂತ್ಯವನ್ನು ಆಯ್ಕೆ ಮಾಡಿಕೊಂಡಾಗ ಉಕ್ರೇನ್ ಕ್ಯಾತೆ ತೆಗೆದಿತ್ತು. ಬೆಲಾರಸ್ ಬೇಡ, ಮೂರನೇ ದೇಶವೊಂದರಲ್ಲಿ ಮಾತುಕತೆ ನಡೆಸಿ ಎಂದು ಸವಾಲೆಸೆದಿತ್ತು. ಅಷ್ಟೇ ಅಲ್ಲ, ಮಾತುಕತೆ ವೇಳೆ ಷರತ್ತು ವಿಧಿಸಬಾರದು, ಸಂಧಾನ ಅರ್ಥಪೂರ್ಣವಾಗಿರಬೇಕು ಎಂದೆಲ್ಲಾ ತಾಕೀತು ಮಾಡಿತ್ತು. ರಷ್ಯಾ ಸರ್ಕಾರದ ಅಧಿಕಾರಿಗಳು ಬೆಲಾರಸ್ ಗಡಿಯಲ್ಲಿ ಕಾದು ಕುಳಿತಿದ್ದರೂ ಕೂಡಾ ಉಕ್ರೇನ್ ಸರ್ಕಾರ ಮಾತುಕತೆ ನಡೆಸಲು ಮುಂದಾಗಲಿಲ್ಲ.
ಈ ಸನ್ನಿವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಣ್ವಸ್ತ್ರ ಪಡೆಗಳಿಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು. ಪುಟಿನ್ ಅವರಿಂದ ಈ ಸೂಚನೆ ಹೊರಬಿದ್ದ ಕೂಡಲೇ ಧಿಗ್ಗನೆ ಎದ್ದು ಕೂತ ಉಕ್ರೇನ್, ಬಹುಬೇಗ ಸಂಧಾನ ಮಾತುಕತೆಗೆ ಸಮ್ಮತಿ ಸೂಚಿಸಿತು. ಯಾವುದೇ ಷರತ್ತನ್ನು ವಿಧಿಸದೆ, ತಗಾದೆ ತೆಗೆಯದೆ ರಷ್ಯಾ ಸೂಚಿಸಿದ್ದ ಸ್ಥಳದಲ್ಲೇ ಮಾತುಕತೆಗೆ ಮುಂದಾಗಿದೆ.
ಸೋಮವಾರದ ಈ ಮಾತುಕತೆ ಫಲಪ್ರದವಾದರೆ ಯುದ್ಧ ನಿಲ್ಲುವ ಸಾಧ್ಯತೆ ಇದೆ. ಇಲ್ಲವಾದ್ರೆ ರಷ್ಯಾ ಪಡೆಗಳ ಆರ್ಭಟ ಇನ್ನಷ್ಟು ಹೆಚ್ಚಬಹುದಾಗಿದೆ. ಏಕೆಂದರೆ, ತಾನು ಮಾತುಕತೆಗೆ ಸಿದ್ಧ ಎಂದು ಹೇಳಿದ ನಂತರವೂ ರಷ್ಯಾ ಸೇನೆ ಕೀವ್ ನಗರದಲ್ಲಿ ತನ್ನ ಕ್ಷಿಪಣಿ ದಾಳಿಯನ್ನು ನಿರಂತರವಾಗಿ ಮುಂದುವರೆಸಿದೆ. ಹೀಗಾಗಿ. ಸಂಧಾನ ಮಾತುಕತೆ ಫಲಪ್ರದ ಆಗುವವರೆಗೂ ನಮ್ಮ ದಾಳಿ ನಿರಂತರ ಎಂಬ ಸಂದೇಶವನ್ನು ರಷ್ಯಾ ನೀಡಿದಂತಾಗಿದೆ
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ