ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರ ಅಂತ್ಯಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ. ಉಕ್ರೇನ್ ದೇಶದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಷ್ಯಾ ಗಡಿಯಲ್ಲಿ ಇರುವ ಬೆಲಾರಸ್ ಪ್ರಾಂತ್ಯ ತಲುಪಿದ್ದು, ಗಡಿ ಭಾಗದಲ್ಲೇ ರಷ್ಯಾ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಆರಂಭಿಸಿದೆ.
ಕದನ ವಿರಾಮ ಘೋಷಣೆ ಆಗುವಂತೆ ನೋಡಿಕೊಳ್ಳುವುದು, ರಷ್ಯಾ ಸೇನಾ ಪಡೆ ಉಕ್ರೇನ್ ನೆಲದಿಂದ ವಾಪಸ್ ತೆರಳುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಉಕ್ರೇನ್ನ ಅಧ್ಯಕ್ಷೀಯ ಕಚೇರಿ ಮಾಹಿತಿ ನೀಡಿದೆ.
ರಷ್ಯಾ ದೇಶದ ಕಡೆಯಿಂದ ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಅಧ್ಯಕ್ಷೀಯ ಕಚೇರಿಯ ಪ್ರಮುಖ ಸಿಬ್ಬಂದಿ ಈ ಮಾತುಕತೆ ವೇಳೆ ಉಪಸ್ಥಿತರಿರಲಿದ್ದಾರೆ. ಇನ್ನು ಉಕ್ರೇನ್ ಕಡೆಯಿಂದ ಅಧ್ಯಕ್ಷರ ಸಲಹೆಗಾರರು ಹಾಗೂ ರಕ್ಷಣಾ ಸಚಿವರು ಇರಲಿದ್ದಾರೆ.
ಮಾತುಕತೆಗೆ ಹಾಗೂ ಸಂಧಾನಕ್ಕೆ ಮೊದಲಿಗೆ ಬೆಲಾರಸ್ ಪ್ರಾಂತ್ಯವನ್ನು ಆಯ್ಕೆ ಮಾಡಿಕೊಂಡಾಗ ಉಕ್ರೇನ್ ಕ್ಯಾತೆ ತೆಗೆದಿತ್ತು. ಬೆಲಾರಸ್ ಬೇಡ, ಮೂರನೇ ದೇಶವೊಂದರಲ್ಲಿ ಮಾತುಕತೆ ನಡೆಸಿ ಎಂದು ಸವಾಲೆಸೆದಿತ್ತು. ಅಷ್ಟೇ ಅಲ್ಲ, ಮಾತುಕತೆ ವೇಳೆ ಷರತ್ತು ವಿಧಿಸಬಾರದು, ಸಂಧಾನ ಅರ್ಥಪೂರ್ಣವಾಗಿರಬೇಕು ಎಂದೆಲ್ಲಾ ತಾಕೀತು ಮಾಡಿತ್ತು. ರಷ್ಯಾ ಸರ್ಕಾರದ ಅಧಿಕಾರಿಗಳು ಬೆಲಾರಸ್ ಗಡಿಯಲ್ಲಿ ಕಾದು ಕುಳಿತಿದ್ದರೂ ಕೂಡಾ ಉಕ್ರೇನ್ ಸರ್ಕಾರ ಮಾತುಕತೆ ನಡೆಸಲು ಮುಂದಾಗಲಿಲ್ಲ.
ಈ ಸನ್ನಿವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಣ್ವಸ್ತ್ರ ಪಡೆಗಳಿಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು. ಪುಟಿನ್ ಅವರಿಂದ ಈ ಸೂಚನೆ ಹೊರಬಿದ್ದ ಕೂಡಲೇ ಧಿಗ್ಗನೆ ಎದ್ದು ಕೂತ ಉಕ್ರೇನ್, ಬಹುಬೇಗ ಸಂಧಾನ ಮಾತುಕತೆಗೆ ಸಮ್ಮತಿ ಸೂಚಿಸಿತು. ಯಾವುದೇ ಷರತ್ತನ್ನು ವಿಧಿಸದೆ, ತಗಾದೆ ತೆಗೆಯದೆ ರಷ್ಯಾ ಸೂಚಿಸಿದ್ದ ಸ್ಥಳದಲ್ಲೇ ಮಾತುಕತೆಗೆ ಮುಂದಾಗಿದೆ.
ಸೋಮವಾರದ ಈ ಮಾತುಕತೆ ಫಲಪ್ರದವಾದರೆ ಯುದ್ಧ ನಿಲ್ಲುವ ಸಾಧ್ಯತೆ ಇದೆ. ಇಲ್ಲವಾದ್ರೆ ರಷ್ಯಾ ಪಡೆಗಳ ಆರ್ಭಟ ಇನ್ನಷ್ಟು ಹೆಚ್ಚಬಹುದಾಗಿದೆ. ಏಕೆಂದರೆ, ತಾನು ಮಾತುಕತೆಗೆ ಸಿದ್ಧ ಎಂದು ಹೇಳಿದ ನಂತರವೂ ರಷ್ಯಾ ಸೇನೆ ಕೀವ್ ನಗರದಲ್ಲಿ ತನ್ನ ಕ್ಷಿಪಣಿ ದಾಳಿಯನ್ನು ನಿರಂತರವಾಗಿ ಮುಂದುವರೆಸಿದೆ. ಹೀಗಾಗಿ. ಸಂಧಾನ ಮಾತುಕತೆ ಫಲಪ್ರದ ಆಗುವವರೆಗೂ ನಮ್ಮ ದಾಳಿ ನಿರಂತರ ಎಂಬ ಸಂದೇಶವನ್ನು ರಷ್ಯಾ ನೀಡಿದಂತಾಗಿದೆ
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?