ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಣ ಸಮರ ಅಂತ್ಯಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿವೆ. ಉಕ್ರೇನ್ ದೇಶದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಷ್ಯಾ ಗಡಿಯಲ್ಲಿ ಇರುವ ಬೆಲಾರಸ್ ಪ್ರಾಂತ್ಯ ತಲುಪಿದ್ದು, ಗಡಿ ಭಾಗದಲ್ಲೇ ರಷ್ಯಾ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಆರಂಭಿಸಿದೆ.
ಕದನ ವಿರಾಮ ಘೋಷಣೆ ಆಗುವಂತೆ ನೋಡಿಕೊಳ್ಳುವುದು, ರಷ್ಯಾ ಸೇನಾ ಪಡೆ ಉಕ್ರೇನ್ ನೆಲದಿಂದ ವಾಪಸ್ ತೆರಳುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಉಕ್ರೇನ್ನ ಅಧ್ಯಕ್ಷೀಯ ಕಚೇರಿ ಮಾಹಿತಿ ನೀಡಿದೆ.
ರಷ್ಯಾ ದೇಶದ ಕಡೆಯಿಂದ ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಅಧ್ಯಕ್ಷೀಯ ಕಚೇರಿಯ ಪ್ರಮುಖ ಸಿಬ್ಬಂದಿ ಈ ಮಾತುಕತೆ ವೇಳೆ ಉಪಸ್ಥಿತರಿರಲಿದ್ದಾರೆ. ಇನ್ನು ಉಕ್ರೇನ್ ಕಡೆಯಿಂದ ಅಧ್ಯಕ್ಷರ ಸಲಹೆಗಾರರು ಹಾಗೂ ರಕ್ಷಣಾ ಸಚಿವರು ಇರಲಿದ್ದಾರೆ.
ಮಾತುಕತೆಗೆ ಹಾಗೂ ಸಂಧಾನಕ್ಕೆ ಮೊದಲಿಗೆ ಬೆಲಾರಸ್ ಪ್ರಾಂತ್ಯವನ್ನು ಆಯ್ಕೆ ಮಾಡಿಕೊಂಡಾಗ ಉಕ್ರೇನ್ ಕ್ಯಾತೆ ತೆಗೆದಿತ್ತು. ಬೆಲಾರಸ್ ಬೇಡ, ಮೂರನೇ ದೇಶವೊಂದರಲ್ಲಿ ಮಾತುಕತೆ ನಡೆಸಿ ಎಂದು ಸವಾಲೆಸೆದಿತ್ತು. ಅಷ್ಟೇ ಅಲ್ಲ, ಮಾತುಕತೆ ವೇಳೆ ಷರತ್ತು ವಿಧಿಸಬಾರದು, ಸಂಧಾನ ಅರ್ಥಪೂರ್ಣವಾಗಿರಬೇಕು ಎಂದೆಲ್ಲಾ ತಾಕೀತು ಮಾಡಿತ್ತು. ರಷ್ಯಾ ಸರ್ಕಾರದ ಅಧಿಕಾರಿಗಳು ಬೆಲಾರಸ್ ಗಡಿಯಲ್ಲಿ ಕಾದು ಕುಳಿತಿದ್ದರೂ ಕೂಡಾ ಉಕ್ರೇನ್ ಸರ್ಕಾರ ಮಾತುಕತೆ ನಡೆಸಲು ಮುಂದಾಗಲಿಲ್ಲ.
ಈ ಸನ್ನಿವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಣ್ವಸ್ತ್ರ ಪಡೆಗಳಿಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡಿದರು. ಪುಟಿನ್ ಅವರಿಂದ ಈ ಸೂಚನೆ ಹೊರಬಿದ್ದ ಕೂಡಲೇ ಧಿಗ್ಗನೆ ಎದ್ದು ಕೂತ ಉಕ್ರೇನ್, ಬಹುಬೇಗ ಸಂಧಾನ ಮಾತುಕತೆಗೆ ಸಮ್ಮತಿ ಸೂಚಿಸಿತು. ಯಾವುದೇ ಷರತ್ತನ್ನು ವಿಧಿಸದೆ, ತಗಾದೆ ತೆಗೆಯದೆ ರಷ್ಯಾ ಸೂಚಿಸಿದ್ದ ಸ್ಥಳದಲ್ಲೇ ಮಾತುಕತೆಗೆ ಮುಂದಾಗಿದೆ.
ಸೋಮವಾರದ ಈ ಮಾತುಕತೆ ಫಲಪ್ರದವಾದರೆ ಯುದ್ಧ ನಿಲ್ಲುವ ಸಾಧ್ಯತೆ ಇದೆ. ಇಲ್ಲವಾದ್ರೆ ರಷ್ಯಾ ಪಡೆಗಳ ಆರ್ಭಟ ಇನ್ನಷ್ಟು ಹೆಚ್ಚಬಹುದಾಗಿದೆ. ಏಕೆಂದರೆ, ತಾನು ಮಾತುಕತೆಗೆ ಸಿದ್ಧ ಎಂದು ಹೇಳಿದ ನಂತರವೂ ರಷ್ಯಾ ಸೇನೆ ಕೀವ್ ನಗರದಲ್ಲಿ ತನ್ನ ಕ್ಷಿಪಣಿ ದಾಳಿಯನ್ನು ನಿರಂತರವಾಗಿ ಮುಂದುವರೆಸಿದೆ. ಹೀಗಾಗಿ. ಸಂಧಾನ ಮಾತುಕತೆ ಫಲಪ್ರದ ಆಗುವವರೆಗೂ ನಮ್ಮ ದಾಳಿ ನಿರಂತರ ಎಂಬ ಸಂದೇಶವನ್ನು ರಷ್ಯಾ ನೀಡಿದಂತಾಗಿದೆ
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ