janadhvani

Kannada Online News Paper

ಮಾಣಿ ಯಲ್ಲಿ ನಡೆದ ಘಟನೆ ಯಲ್ಲಿ ಅಮಾಯಕನ ಬಂಧನ ಖಂಡನೀಯ ಕರ್ನಾಟಕ ಮುಸ್ಲಿಂ ಜಮಾಅತ್

ಮಾಣಿ – ಕಳೆದ 3 ದಿನಗಳ ಹಿಂದೆ ಮಾಣಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ನಡೆದ ಅಮಾನವೀಯ ರೀತಿಯಲ್ಲಿ ಹಲ್ಲೆ ಪ್ರಕರಣದ ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ನೈಜ ಆರೋಪಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಆರೋಪಿಯನ್ನು ಪತ್ತೆಹಚ್ಚದೆ, ಆಗದೆ ಮಾಣಿ ಆಸುಪಾಸಿನಲ್ಲಿ ಜಾತಿ,ಸಂಘ,ಪಕ್ಷ, ಬಣ್ಣ ನೋಡದೆ ಜನಸೇವೆ ಮಾಡುವಂತಹ ಎಲ್ಲಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಅಮಾಯಕ ವ್ಯಕ್ತಿ SჄS ಸೂರಿಕುಮೇರ್ ಬ್ರಾಂಚ್ ಸಂಘಟನೆಯ ನಾಯಕರೂ ಆದಂತಹ ಹನೀಫ್ ಸಂಕ ಎಂಬವರನ್ನು ವಿಚಾರಣೆಯ ನೆಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿರುವುದು ಖಂಡನೀಯ.

ಅ ಘಟನೆ ಯ ವಿಡಿಯೋ ಮತ್ತೋಮ್ಮೆ ಪರಿಶೀಲಿಸಿ ಹನೀಫ್ ಸಂಕ ಅವರನ್ನು ತಕ್ಷಣವೇ ಬಿಡುಗಡೆ ಗೊಳಿಸಬೇಕು, ನೈಜ ಆರೋಪಿಗಳನ್ನು ಬಂಧಿಸಬೇಕು.ನಿರಪರಾಧಿಗಳನ್ನು‌ಬಂದಿಸಿ ನೈಜ ಆರೋಪಿಗಳಿಗೆ ರಕ್ಷಣೆ ನೀಡುವಂತಹ ಕ್ರಮ ಖಂಡನೀಯ ,ಕೂಡಲೇ ಪೋಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹಿಸಿ ನಿರಪರಾದಿಗೆ ನ್ಯಾಯ ಒದಗಿಸಬೇಕು .

error: Content is protected !! Not allowed copy content from janadhvani.com