ಕಿನ್ಯಾ :ಭಾರತದ ಸ್ವಾತಂತ್ರ್ಯೊತ್ಸವದ ಅಮೃತ ವರ್ಷಾಚರಣೆಯ ಪ್ರಯುಕ್ತ ಪ್ರಜಾ ಭಾರತ ಉಳಿಯಲಿ ಎಂಬ ಧ್ಯೇಯ ವಾಕ್ಯದೊಂದಿಗೆ SSF ಕಿನ್ಯಾ ಸೆಕ್ಟರ್ ಹಾಗೂ SSF ಬೆಳರಿಂಗೆ ಯುನಿಟ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಆಝಾದಿ ಸಪ್ತಾಹ ಕಾರ್ಯಕ್ರಮವು SSF ಬೆಳರಿಂಗೆ ಶಾಖಾಧ್ಯಕ್ಷರಾದ ಹಾರಿಸ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ನಾಯಕರಾದ ಕೆ.ಎಚ್. ಇಸ್ಮಾಯಿಲ್ ಸಅದಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಧ್ಘಾಟನಾ ಭಾಷಣದಲ್ಲಿ ಹನೀಫ್ ಸಖಾಫಿ ಕುತುಬಿ ನಗರ ರವರು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಸೆಕ್ಟರ್ ಅಧ್ಯಕ್ಷರಾದ ನೌಫಲ್ ಅಹ್ಸನಿ ಹಾಗೂ ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಯಾಝ್ ಕಿನ್ಯ ಶುಭಹಾರೈಸಿದರು.”ಪ್ರಜಾಭಾರತ ಉಳಿಯಲಿ” ಎಂಬ ವಿಷಯದಲ್ಲಿ ಇರ್ಫಾನ್ ಅಬ್ದುಲ್ಹಾ ನೂರಾನಿ ವಿಷಯ ಮಂಡಿಸಿದರು. ಹಾಗೂ ಮೆಹಬೂಬ್ ಸಖಾಫಿ ಕಿನ್ಯ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಕೆ.ಸಿ.ಎಫ್. ಬಹ್ರೈನ್ ನಾಯಕರಾದ ಹನೀಫ್ ಸಾಗ್, SYS ಕಿನ್ಯ ಸೆಂಟರ್ ಕೋಶಾಧಿಕಾರಿ ಉಸ್ಮಾನ್ ಝಹ್ರಿ, SSF ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಕಿನ್ಯ, ಉಮರ್ ಝಹ್ರಿ, ಸೆಕ್ಟರ್ ಮೀಡಿಯ ಕಾರ್ಯದರ್ಶಿ ಇರ್ಫಾನ್ ಮುಸ್ಲಿಯಾರ್, SYS ಹಾಗೂ SSF ನ ಸಕ್ರೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ ಸ್ವಾಗತಿಸಿ ವಂದಿಸಿದರು.