janadhvani

Kannada Online News Paper

ಮುನವ್ವಿರುಲ್ ಇಸ್ಲಾಂ ಮದರಸ ಬಂಡಸಾಲೆ- SBS ನೂತನ ಸಮಿತಿ ಸಾರಥಿಗಳು

ಮಂಜನಾಡಿ: ಮುನವ್ವಿರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಸಂಘಟನೆಯಾದ
ಎಸ್ ಬಿ ಎಸ್ ಬಂಡಸಾಲೆ ಇದರ ವಾರ್ಷಿಕ ಮಹಾಸಭೆಯು ಆದಿತ್ಯವಾರದಂದು ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು, ಶರೀಫ್ ಮದನಿ ಉಸ್ತಾದ್ ಪ್ರಾರ್ಥನೆಗೈದು ಸಭೆಯನ್ನು ಉದ್ಘಾಟಿಸಿದರು, ಕಾರ್ಯದರ್ಶಿ ಸಹೀರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಝಕೀರ್ ವರದಿ ವಾಚಿಸಿ, ಕೋಶಾಧಿಕಾರಿ ಫಹೀಮ್ ಲೆಕ್ಕಪತ್ರ ಮಂಡಿಸಿದರು.

ನೂತನ ಸಮಿತಿ ರಚನೆ:
ಸುನ್ನೀ ಬಾಲ ಸಂಘ ಬಂಡಸಾಲೆ ಇದರ ಅಧ್ಯಕ್ಷರಾಗಿ ಇಬ್ರಾಹೀಂ ಸಹೀರ್ , ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಜಾಕೀರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಸುಹೈಲ್ ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಫಹೀಮ್, ಮುಹಮ್ಮದ್ ಶಾಮೀಲ್ ಕಾರ್ಯದರ್ಶಿಗಳಾಗಿ ಅಬ್ದುಲ್ ಖಾದಿರ್ ಶರಾಫತ್ , ಮುಹಮ್ಮದ್ ಹಾಷೀರ್, ಫಂಡ್ ಕಲೆಕ್ಟರ್ ಶರಾಫತ್
ಹಾಗೂ 7 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.ಕಾರ್ಯದರ್ಶಿ ಝಕೀರ್ ದನ್ಯವಾದ ಸಲ್ಲಿಸಿದರು.

ವರದಿ:
ಮುಹಮ್ಮದ್ ಶರೀಫ್ ಮದನಿ ಬೆಳ್ತಂಗಡಿ

error: Content is protected !! Not allowed copy content from janadhvani.com