ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ ಏಕದಿನ ಆರು ಡಿವಿಷನ್ ಗಳಲ್ಲಿ ಶಾಖಾ ಸಂಚಾರ್ ಉದ್ಘಾಟನೆ ಕಾರ್ಯಕ್ರಮ ಜಿಲ್ಲಾ ನಾಯಕರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಯೊಬ್ಬ ಜಿಲ್ಲಾ ಸದಸ್ಯರು ನಿರ್ದಿಷ್ಟ ಶಾಖೆಗಳಿಗೆ ಜುಲೈ 14 ರಿಂದ ಅಗಸ್ಟ್ 14 ರವರೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಹೈದರಾಲಿ 4ನೇ ಬ್ಲಾಕ್ ಕಾಟಿಪಳ್ಳ, ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮಧ್ಯನಡ್ಕ, ಕ್ಯೂಡಿ ಸೆಕ್ರೆಟರಿ ಇಬ್ರಾಹಿಂ ಅಹ್ಸನಿ ಮಂಜನಾಡಿ, ದಅ್ವಾ ಸೆಕ್ರೆಟರಿ ಆರಿಫ್ ಝುಹ್ರಿ ಮುಕ್ಕ, ಕಲ್ಚರಲ್ ಕೌನ್ಸಿಲ್ ಸೆಕ್ರೆಟರಿ ನವಾಝ್ ಸಖಾಫಿ ಅಡ್ಯಾರ್ ಪದವು, ಮೀಡಿಯಾ ಸೆಕ್ರೆಟರಿ ಆಬಿದ್ ನಈಮಿ ಕಟ್ಟತ್ತಿಲ,ಕ್ಯಾಂಪಸ್ ಸೆಕ್ರೆಟರಿ ಝುಹೈರ್ ಮಾಸ್ಟರ್ ಬಜ್ಪೆ, ವಿಸ್ಡಮ್ ಸೆಕ್ರೆಟರಿ ಸುಹೈಲ್ 10 ನೇ ಮೈಲ್, ರೈನ್ಬೋ ಸೆಕ್ರೆಟರಿ ಮನ್ಸೂರ್ ಬಜಾಲ್, ಪಬ್ಲಿಕೇಶನ್ ಸೆಕ್ರಟರಿ ಹಮೀದ್ ತಲಪಾಡಿ,ಐಟಿ ಸೆಕ್ರೆಟರಿ ಇರ್ಷಾದ್ ಹಾಜಿ ಗೂಡಿನಬಳಿ ಹಾಗೂ ಡಿವಿಷನ್ ,ಸೆಕ್ಟರ್ ,ಯುನಿಟ್ ನಾಯಕರು ಉಪಸ್ಥಿತಿರಿದ್ದರು.