ಕಳೆದ ನಡುಗವ ಚಳಿಗಾಲ , ಉತ್ತರ ಭಾರತದ ಸೂರಿಲ್ಲದ ಜನರಿಗೆ ರಸ್ತೆಬದಿಯ ಅನಾಥರಿಗೆ ಬೆಚ್ಚಗಿನ ಹೊದಿಕೆ ಸಂಗ್ರಹ ಹಾಗು ವಿತರಣೆ ಕಾರ್ಯಕ್ರಮ ಕೆ ಸಿ ಎಫ್
ಯು.ಎ.ಇ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿತ್ತು,.
ಕಾಡು ಮೇಡಿನೆಡೆಯಲ್ಲಿ ಜೀವಿಸುವ ಸೂರಿಲ್ಲದ ಕುಟುಂಬವೊ಼ಂದಕ್ಕೆ ಶಾಸ್ವತ ಪರಿಹಾರದ ಬಗ್ಗೆ ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ಕೆ.ಸಿ.ಎಫ್ ಯು.ಎ.ಇ ದೆಹಲಿಯ ಪ್ರತೀಷ್ಠಿತ ತೈಬಾ ಗಾರ್ಡನ್ ಜತೆ ಕೈ ಜೊಡಿಸಿ ಚಳಿಯಿಂದ ಕಂಗೆಟ್ಟ ಸುಮಾರು 500ಕ್ಕೂ ಮಿಕ್ಕ ಕುಟುಂಬಗಳಿಗೆ ದಪ್ಪನೆಯ ಬ್ಲಾಂಕೆಟ್ ವಿತರಿಸೂದರೊಂದಿಗೆ ಕೆ.ಸಿ.ಎಫ್ ಅಬುಧಾಬಿ ಘಟಕವು ಧಾನಿಯೋರ್ವರಿಂದ ಉತ್ತರಖಾಂಡ್ ಗುಡ್ಡಗಾಡಿನ ಬಯಲು ಪ್ರದೇಶದ ಗಫ್ಪಾರ್ ಎಂಬ ಕುಟುಂಬಕ್ಕೆ ಶಾಸ್ವತ ಪರಿಹಾರವನ್ನು ನೀಡಲು ತೀರ್ಮಾನಿಸಲಾಯಿತು.
ಹಾಗು ಕಂಬಳಿಗಳ ಜೊತೆಗೆ ಮನೆಯಕೆಲಸವು ವಿಶ್ವಪ್ರಖ್ಯಾತ ಮರ್ಕಝ್ ಡೈರೆಕ್ಟರ್ ಡಾ!ಹಕೀಂ ಅಜ್ಹರಿಯವರ ನೇತ್ರತ್ವದಲ್ಲಿ ಶಿಲಾನ್ಯಾಸಗೈದು ನಾಲ್ಕೈದು ತಿಂಗಳಲ್ಲಿ ಸುಂದರವಾಗಿ ನಿರ್ಮಿಸಿ ಹಸ್ತಾಂತರಿಸಲಾಯಿತು.
ಇದು ಮಂದೆ ಶಾಶ್ವತವಾಗಿ ಶೀತಗಾಳಿಯ ಅಬ್ಬರವಿಲ್ಲದೆ ಕುಂಟುಂಬಕ್ಕೆ ರಕ್ಷಾಕವಚವಾಗಿದೆ ಮತ್ತು ನೂತನ ಮನೆ ಹಲವಾರು ಸಂದಿಗ್ದತೆಗಳೆಡೆಯಲ್ಲಿ (ಕೊರಣ, ಮಳೆ , ಚಳಿ, ಕಾಡುಪ್ರದೇಷಗಳಿಗೆ ಕಚ್ಚವಸ್ತುಗಳ ಸಾಗಟ)ಅಚ್ಚುಕಟ್ಟಾದ ಮನೆಗೆ ಸಹಕರಿಸಿದ ಧಾನಿಗಳಿಗೆ , ಕಾಮಗಾರಿಯ ಜವಾಬ್ದಾರಿ ಅಚ್ಚುಗಟ್ಟಾಗಿನಿರ್ವಹಿಸಿದ ತೈಬಾ ಗಾರ್ಡನ್ ದೆಹಲಿ ಸ್ವಯಂಸೆವಕರಿಗೂ,ಬಹು!ಜಲೀಲ್ ನಿಝಾಮಿ ,ಝೈನುದ್ದೀನ್ ಹಾಜಿ ಬೆಲ್ಳಾರೆ , ಗಫೂರ್ ಸಂಪಾಜೆ ಶಾಫಿ ನೂರಾನಿ ದೆಹಲಿ,ಹಾಗು ಕೆಸಿಎಫ್ ಅಬುಧಾಬಿ ಇದರ ಸಹಕಾರ್ಯಕರ್ತರಿಗೆ ಈ ಮೂಲಕ ಹೃತ್ಪೂರ್ವಕ ಅಭಿನಂಧನೆಗಳನ್ನು ಸಲ್ಲಿಸುತ್ತಿದ್ದೇವೆ.