ದಮ್ಮಾಮ್ :ಸಾಂತ್ವನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕೆ.ಸಿ.ಎಫ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ
ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ಆಸರೆಯಾಗಿದ್ದಾರೆ.
ದಮ್ಮಾಮ್, ಜುಬೈಲ್ ಹಾಗೂ ಸೌದಿ ಅರೇಬಿಯಾದ ಯಾವುದೇ ಸ್ಥಳದಲ್ಲಿ ರಕ್ತದಾನ ಹಾಗು ಇನ್ನಿತರ ಸಾಂತ್ವನ ಕಾರ್ಯದಲ್ಲಿ ಕೆ.ಸಿ.ಎಫ್ ಸಂಘಟನೆ ಬಲಿಷ್ಟ ತಂಡವೊಂದನ್ನು ಕಟ್ಟಿ ಕಷ್ಟದಲ್ಲಿರುವ ಗಲ್ಫ್ ಕನ್ನಡಿಗರ ಕಣ್ಣೀರೊರೆಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಕೋವಿಡ್ ಹಾಗು ಇನ್ನಿತರ ರೋಗದಲ್ಲಿರುವ ರೋಗಿಗಳಿಗೆ ರಕ್ತದ ಅವಶ್ಯಕತೆಯ ಮನವಿ ಕೋರಿ ಬಂದಾಗ ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡವು ಕೂಡಲೇ ರಕ್ತದಾನ ಮಾಡಿ ಸ್ಪಂದಿಸುತ್ತಾ ಬಂದಿದೆ.
ವಿಶೇಷವಾಗಿ ಕಳೆದ ತಿಂಗಳು ಬಹಳ ಕಡಿಮೆ ಸಿಗುವ O ನೆಗಟೀವ್ ರಕ್ತವನ್ನು ಕೂಡಲೆ ವ್ಯವಸ್ಥೆಮಾಡಿ ದಾನ ಮಾಡಿದೆ. ಈ ಒಂದು ವ್ಯತ್ಯಸ್ಥ ಕಾರ್ಯಾಚರಣೆಯಿಂದ ಆಸ್ಪತ್ರೆ ಸಿಬ್ಬಂಧಿಗಳು ಹಾಗೂ ರೋಗಿಯ ಕುಟುಂಬಸ್ಥರು ಬ್ಲಡ್ ಸೈಬೋ ತಂಡವನ್ನು ಶ್ಲಾಘಿಸಿದ್ದಾರೆ.ಹಾಗು ಆಸ್ಪತ್ರೆಯ ವತಿಯಿಂದ ಅಭಿನಂಧನಾ ಪತ್ರವನ್ನು ನೀಡಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ರಶೀದ್ ಸಖಾಫಿ, ಝೋನ್ ಸಾಂತ್ವನ ಕನ್ವೀನರ್ ಭಾಷಾ ಗಂಗಾವಳಿ, ಹಾಗು ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡದ ನಾಯಕ ನೌಫಲ್ ಮುಲ್ಕಿ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ