ದಮ್ಮಾಮ್ :ಸಾಂತ್ವನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕೆ.ಸಿ.ಎಫ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ
ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ಆಸರೆಯಾಗಿದ್ದಾರೆ.
ದಮ್ಮಾಮ್, ಜುಬೈಲ್ ಹಾಗೂ ಸೌದಿ ಅರೇಬಿಯಾದ ಯಾವುದೇ ಸ್ಥಳದಲ್ಲಿ ರಕ್ತದಾನ ಹಾಗು ಇನ್ನಿತರ ಸಾಂತ್ವನ ಕಾರ್ಯದಲ್ಲಿ ಕೆ.ಸಿ.ಎಫ್ ಸಂಘಟನೆ ಬಲಿಷ್ಟ ತಂಡವೊಂದನ್ನು ಕಟ್ಟಿ ಕಷ್ಟದಲ್ಲಿರುವ ಗಲ್ಫ್ ಕನ್ನಡಿಗರ ಕಣ್ಣೀರೊರೆಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಕೋವಿಡ್ ಹಾಗು ಇನ್ನಿತರ ರೋಗದಲ್ಲಿರುವ ರೋಗಿಗಳಿಗೆ ರಕ್ತದ ಅವಶ್ಯಕತೆಯ ಮನವಿ ಕೋರಿ ಬಂದಾಗ ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡವು ಕೂಡಲೇ ರಕ್ತದಾನ ಮಾಡಿ ಸ್ಪಂದಿಸುತ್ತಾ ಬಂದಿದೆ.
ವಿಶೇಷವಾಗಿ ಕಳೆದ ತಿಂಗಳು ಬಹಳ ಕಡಿಮೆ ಸಿಗುವ O ನೆಗಟೀವ್ ರಕ್ತವನ್ನು ಕೂಡಲೆ ವ್ಯವಸ್ಥೆಮಾಡಿ ದಾನ ಮಾಡಿದೆ. ಈ ಒಂದು ವ್ಯತ್ಯಸ್ಥ ಕಾರ್ಯಾಚರಣೆಯಿಂದ ಆಸ್ಪತ್ರೆ ಸಿಬ್ಬಂಧಿಗಳು ಹಾಗೂ ರೋಗಿಯ ಕುಟುಂಬಸ್ಥರು ಬ್ಲಡ್ ಸೈಬೋ ತಂಡವನ್ನು ಶ್ಲಾಘಿಸಿದ್ದಾರೆ.ಹಾಗು ಆಸ್ಪತ್ರೆಯ ವತಿಯಿಂದ ಅಭಿನಂಧನಾ ಪತ್ರವನ್ನು ನೀಡಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಕೆಸಿಎಫ್ ದಮ್ಮಾಮ್ ಝೋನ್ ಅಧ್ಯಕ್ಷರಾದ ರಶೀದ್ ಸಖಾಫಿ, ಝೋನ್ ಸಾಂತ್ವನ ಕನ್ವೀನರ್ ಭಾಷಾ ಗಂಗಾವಳಿ, ಹಾಗು ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡದ ನಾಯಕ ನೌಫಲ್ ಮುಲ್ಕಿ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ