ಸುಳ್ಯ : ದೇವಸ್ಥಾನಕ್ಕೆ ಸೇರಿದ ಮೈದಾನದಲ್ಲಿ ಗೆಳೆಯರೊಂದಿಗೆ ಆಟಆಡುತಿದ್ದ ಕ್ರೈಸ್ತ ಯುವಕನನ್ನು ಮೈದಾನದಿಂದ ಹೊರದಬ್ಬಿದ ಘಟನೆ ಸುಳ್ಯ ಸಮೀಪದ ಜಯನಗರದ ಕೊರಂಬಡ್ಕ ದೈವಸ್ಥಾನದ ಮೈದಾನದಲ್ಲಿ ನಡೆದಿದೆ.
ಹಿಂದೂ ಯುವಕರೊಂದಿಗೆ ಆಟವಾಡುತಿದ್ದ ಕ್ರೈಸ್ತ ಯುವಕನ ಬಳಿಬಂದ ಪ್ರವೀಣ್ ಎಂಬಾತ ಯುವಕನನ್ನು ತರಾಟೆಗೆ ತೆಗೆದು ನೀನು ಹಿಂದು ಅಲ್ಲ ಹೊರಗೆ ಹೋಗು ಇಲ್ಲಿ ಆಡಬಾರದು ಎಂದಿದ್ದಾನೆ.
ಇದನ್ನು ವಿರೋಧಿಸಿದ ಆತನ ಗೆಳೆಯನಿಗೆ “ನೋಡು ಲೋಕೇಶ್, ನನಗೆ ನಿನ್ನ ಮೇಲೆಯಾಗಲೀ ಅಥವಾ ಅ ಹುಡಗನ ಮೇಲೆಯಾಗಲೀ, ಯಾರ ಮೇಲೂ ಕೋಪವಿಲ್ಲ, ಜಗಳ ಮಾಡುವುದಾದರೆ ಮಾಡುವ ನನಗೇನು ಅಭ್ಯಂತರವಿಲ್ಲ, ನಾನು ಶಾಸಕರಿಗೆ ಕರೆ ಮಾಡಿ ಮೊದಲೇ ಹೇಳಿದ್ದೇನೆ, ನನಗೆ ಯಾರ ಭಯವಿಲ್ಲ. ಇವರು ಎಸ್ಸಿ, ಎಸ್ಟಿ ಆದರೆ ಇವರ ಜೊತೆ ಆಡುವುದರಲ್ಲಿ ನನಗೆ ಸಮಸ್ಯೆ ಇಲ್ಲ. ಆದರೆ ಹಿಂದೂ ಅಲ್ಲದ ಬೇರೆ ಧರ್ಮದವರ ಜೊತೆ ಇಲ್ಲಿ ಆಡುತ್ತಿದ್ದೀರಲ್ಲ, ಯಾಕೆ ಅವರ ಜೊತೆ ಆಡುತಿದ್ದೀರಿ ? ಎಂದು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಕ್ರೈಸ್ಥ ಯುವಕನ ಬೆಂಬಲಕ್ಕೆ ನಿಂತು ಆಟದಲ್ಲಿ ಧರ್ಮಯಾಕೆ ಎಂದು ಪ್ರಶ್ನಿಸಿದ ಯುವಕನಿಗೆ “ನಾವು ಮುಸ್ಲಿಮರ ಬಳಿ ಹೋಗಲ್ಲ, ಕ್ರೈಸ್ತರ ಬಳಿ ಸಹ ಹೋಗಲ್ಲ, ಚರ್ಚ್ ಎದುರು ಮೈದಾನವಿದೆ ಅಲ್ಲಿ ಹೋಗಿ ಆಡಲು ಸಾಧ್ಯವೇ? ನೀನು ಹಿಂದು ಅಲ್ಲ ಹೊರಗೆ ಹೋಗು , ಕೊರಗಜ್ಜ ಹಿಂದುಗಳದ್ದು, ನಿಮ್ಮದಲ್ಲ ಎಂದು ದಬಾಯಿಸಿದ್ದಾನೆ.
ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕರು ಜೊತೆಯಾಗಿ ಆಡುವಾಗ ಧರ್ಮ ಯಾಕೆ ಎಂದು ಜನ ಪ್ರಶ್ನಿಸುವಂತಾಗಿದೆ.