ಮುಂಬಯಿ: ತಾವು ಯೆಮನ್ನಲ್ಲಿ ಜನಿಸಿದ್ದು ಎಂಬ ಗುಟ್ಟನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆಗಿನ ತಮ್ಮ ಸಂಬಂಧಕ್ಕೆ ಐತಿಹಾಸಿಕ ನಂಟು ಇದೆ ಎಂದು ಹೇಳಿಕೊಂಡಿದ್ದಾರೆ.
ಕತಾರ್ ಎಕನಾಮಿಕ್ ಫೋರಂನ ಸಂವಾದದಲ್ಲಿ ಮಾತನಾಡಿದ ಮುಕೇಶ್, “ನಿನ್ನ ಮೈಯಲ್ಲಿಅರೇಬಿಕ್ ರಕ್ತ ಹರಿಯುತ್ತಿದೆ ಎಂದು ನನ್ನ ತಂದೆ ಹೇಳುತ್ತಿದ್ದರು. ನಾನು ಜನಿಸಿದ್ದು ಯೆಮನ್ನಲ್ಲಿ. ಬಹುಶಃ ನನ್ನ ಹೆತ್ತವರು ಇಲ್ಲಿಗೆ ಪ್ರವಾಸ ಬಂದಿದ್ದಾಗ ನಾನು ಜನಿಸಿರಬಹುದು” ಎಂದು ಹೇಳಿದ್ದಾರೆ.
“ನನ್ನ ಕುಟುಂಬ ಕತಾರ್ ಜತೆ ಉತ್ತಮ ಬಾಂಧವ್ಯ ಹೊಂದಿದೆ. ಕತಾರ್ ರಾಜಮನೆತನದ ಬಗ್ಗೆ ನಮಗೆ ಹೆಮ್ಮೆ ಇದೆ. ಕ್ರೀಡೆ ಹಾಗೂ ಸಂಸ್ಕೃತಿಯಲ್ಲಿ ಕತಾರ್ ಮಾಡಿದ ಸಾಧನೆಗೆ ನನ್ನ ಪತ್ನಿ ಅಭಿಮಾನಿಯೇ ಆಗಿದ್ದಾಳೆ. ನನ್ನ ಮಗಳು ಸಹ ಕತಾರ್ ಫೌಂಡೇಷನ್ ಸಾಧನೆ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾಳೆ. ನಮ್ಮ ಇಡೀ ಕುಟುಂಬವೇ ಕತಾರ್ ಫೌಂಡೇಷನ್ ಹಾಗೂ ರಾಜಮನೆತನದ ಬಗ್ಗೆ ಹೆಮ್ಮೆಪಡುತ್ತದೆ” ಎಂದು ತಿಳಿಸಿದ್ದಾರೆ.
“ಅಷ್ಟೇ ಅಲ್ಲ, ಅರೇಬಿಕ್ ದೇಶಗಳ ಜತೆ ಭಾರತದ ಸಂಬಂಧ ಶತಮಾನಗಳಿಂದಲೂ ಉತ್ತಮವಾಗಿದೆ.
ಕತಾರ್ನಲ್ಲಿಯೇ ಸುಮಾರು ಏಳು ಲಕ್ಷ ಭಾರತೀಯರು ಇದ್ದಾರೆ. ಅವರೆಲ್ಲರೂ ಭಾರತಕ್ಕೆ ಕತಾರ್ ವಕ್ತಾರರಿದ್ದಂತೆ” ಎಂದು ತಿಳಿಸಿದ್ದಾರೆ.
ಡಿಜಿಟಲ್ ಪ್ರಾಮುಖ್ಯ ಕುರಿತು ಮಾತನಾಡಿದ ರಿಲಯನ್ಸ್ ಮುಖ್ಯಸ್ಥ, ”ಮನುಷ್ಯನಿಗೆ ಆಹಾರ, ಬಟ್ಟೆ, ವಸತಿಯಂತೆಯೇ ಸಂಪರ್ಕ ಹಾಗೂ ಸಂವಹನವೂ ಮೂಲಭೂತ ಅವಶ್ಯಕತೆಗಳಾಗಿವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಮೂಲಸೌಕರ್ಯದ ಮಹತ್ವದ ಮನವರಿಕೆಯಾಗಿದೆ,” ಎಂದು ಹೇಳಿದ್ದಾರೆ
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ