ಉಳ್ಳಾಲ , ಕೆ.ಸಿ ರೋಡ್ ಸಮೀಪದ ಕಾಟುಂಗರೆ ಮುಹ್ಯಿದ್ದೀನ್ ಮಸೀದಿ ಪರಿಸರದಲ್ಲಿರುವ 59 ಮನೆಗಳಿಗೆ ಧರ್ಮ,ಜಾತಿ,ಪಂಥ ವ್ಯತ್ಯಾಸ ಭೇದವಿಲ್ಲದೆ ಅಗತ್ಯ ವಸ್ತುಗಳನೊಳಂಡ ದಿನಸಿ
ಕಿಟ್ಗಳನ್ನು ಗಲ್ಫ್ ಕಮಿಟಿ ಮತ್ತು S.S.F ಕಾಟುಂಗರೆ ಗುಡ್ಡೆ ಯುನಿಟ್ ಇದರ ಸಹಕಾರದೊಂದಿಗೆ ಸ್ಥಳೀಯ ಮಸೀದಿ ಇಮಾಂ ಹಾಗೂ ಮಸೀದಿ ಅಧ್ಯಕ್ಷರಾದ ಅಬೂಬಕರ್ ಹಾಜಿಯವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನಾ ನಾಯಕರಾದ ದಾವೂದ್,ಝೈನುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಯಶಸ್ಸಿಗೆ ಬೇಕಾಗಿ ಅಬ್ದುಲ್ ರಝಾಕ್ ನೇತೃತ್ವದಲ್ಲಿ ಅಬ್ದುಲ್ ಲತೀಫ್ (ಡೈಮಂಡ್),ರಿಝ್ವಾನ್ , ಇಬ್ರಾಹಿಮ್ ರಿಯಾದ್,ನಿಯಾಝ್ ಟಿ,ಬಶೀರ್,ಇಬ್ರಾಹಿಮ್ ಮಂಜನಾಡಿ,ಹನೀಫ್,ಸಾದಿಕ್ ಹಾಗೂ ಇತರೆ ಗಲ್ಫ್ ಸದಸ್ಯರು ಆರ್ಥಿಕ ನೆರವು ನೀಡಿದರು.