janadhvani

Kannada Online News Paper

ಇಂದು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ವಿಸ್ಡಂ ವತಿಯಿಂದ ಕ್ಯಾರಿಯರ್ ಪ್ಲಸ್ ಕಾರ್ಯಾಗಾರ

ಉಡುಪಿ, ಜೂ 13: ಎಸ್ಸೆಸ್ಸೆಫ್ ಉಡುಪಿ ಜಿಲ್ಲೆ ವಿಸ್ಡಂ ವಿಭಾಗದ ವತಿಯಿಂದ ಪ್ರೌಢ ಶಾಲಾ, ಪದವಿಪೂರ್ವ ಹಾಗೂ ಪದವಿ ವಿಧ್ಯಾರ್ಥಿಗಳಿಗಾಗಿ “ಕ್ಯಾರಿಯರ್ ಪ್ಲಸ್” ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರ ಜೂನ್ 13, ಇಂದು ಝೂಂ ಹಾಗೂ ಯುಟ್ಯೂಬ್ ಮೂಲಕ, ಎಸ್ಸೆಸ್ಸೆಫ್ ಉಡುಪಿ ಜಿಲ್ಲೆ ಅಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ರಾತ್ರಿ 8 ರಿಂದ ನಡೆಯಲಿದೆ.

ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ವಿಭಾಗದ ಕಾರ್ಯದರ್ಶಿ ಎನ್.ಸಿ ರಹೀಂ ಹೊಸ್ಮಾರ್ ಉದ್ಘಾಟಿಸಲಿದ್ದಾರೆ..

ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಪ್ರಾಚಾರ್ಯರಾದ ಶಹೀನ್ ಅಲಿ ಎಸ್.ಬಿ ಹಾಗೂ ನಾಸಿರ್ ಮಾಸ್ಟರ್ ಬಜ್ಪೆ ತರಬೇತಿ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೂರು, ಫಿನಾನ್ಸ್ ಸೆಕ್ರೆಟರಿ ಅಲ್ತಾಫ್ ಕಾರ್ಕಳ, ಹಾಗೂ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಾಯಕರಾದ ರವೂಫ್ ಖಾನ್, ಅಶ್ರಫ್ ಮುಸ್ಲಿಯಾರ್, ಕೆ.ಎಸ್.ಎಮ್ ಮನ್ಸೂರ್ , ರಖೀಬ್ ಕನ್ನಂಗಾರ್ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಉಡುಪಿ ಜಿಲ್ಲೆ ವಿಸ್ಡಂ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com