ಆಯವ್ಯಯದ ಅನುದಾನವನ್ನೇ ಭರಿಸುವಂತೆ ಸರಕಾರದ ಆದೇಶ
ಬೆಂಗಳೂರು: ರಾಜ್ಯದ ವಖ್ಫ್ ನೋಂದಾಯಿತವಲ್ಲದ ಮಸೀದಿಗಳ ಇಮಾಮ್ ಮತ್ತು ಮೌಜಿನ್ ಹಾಗೂ ಎಲ್ಲ ಮದ್ರಸಗಳ ಸಿಬ್ಬಂದಿಗಳಿಗೆ ತುರ್ತು ಪರಿಹಾರಕ್ಕೆ ಪ್ರತ್ಯೇಕ ಸಹಾಯಧನ ಬಿಡುಗಡೆ ಮಾಡುವಂತೆ ರಾಜ್ಯ ವಖ್ಫ್ ಬೋರ್ಡ್ ಸದಸ್ಯರುಗಳಾದ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ, ಯಾಕೂಬ್ ಯೂಸುಫ್ ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯದ 10193 ನೋಂದಾಯಿತ ಹಾಗೂ 1368 ನೊಂದಾಯಿಸದ ಒಟ್ಟು 11561 ಮಸೀದಿಗಳ ಪೇಶ್ ಇಮಾಮಗಳು ಹಾಗೂ ಮೌಜಿನ್ ಗಳಿಗೆ ತಗಲುವ ಅಂದಾಜು ಸಹಾಯಧನದ ಮೊತ್ತ ರೂ.693.66 ಲಕ್ಷಗಳು ಹಾಗೂ ಮದ್ರಸ ಸಿಬ್ಬಂದಿಗಳಿಗೆ 1572 ನೋಂದಾಯಿಸಿದ ಹಾಗೂ 495 ನೋಂದಾಯಿಸದ ಒಟ್ಟು 2067 ಮದರಸಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 5080 ಮುಅಲ್ಲಿಮ್/ಸಿಬ್ಬಂದಿಗಳಿಗೆ ತಗಲುವ ಅಂದಾಜು ಸಹಾಯಧನ ಮೊತ್ತ 152.40 ಲಕ್ಷಗಳು ಒಟ್ಟು 846.00 ಲಕ್ಷಗಳನ್ನು ಮಂಜೂರು ಮಾಡುವಂತೆ ದಿನಾಂಕ 04-06-2021 ರಂದು ರಾಜ್ಯ ವಖ್ಫ್ ಮಂಡಳಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರು(ಸಿಇಒ) ರಾಜ್ಯ ಸರಕಾರವನ್ನು ಕೋರಿಕೊಂಡಿದ್ದರು.
ಆದರೆ ಸಿಇಒ ರ ಕೋರಿಕೆಗೆ ಪ್ರತಿಕ್ರಿಯೆ ಎಂಬಂತೆ ಸರಕಾರವು ದಿನಾಂಕ 07-06-2021 ರಲ್ಲಿ ಹೊರಡಿಸಿರುವ ಆದೇಶ (ಸಂಖ್ಯೆ MWD 51 WES )ದಲ್ಲಿ ಈಗಾಗಲೇ 2021-22 ಸಾಲಿನ ಆಯವ್ಯಯದಲ್ಲಿ ವಖ್ಫ್ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಜಿನ್ ರಿಗೆ ಸಂಭಾವನೆಗೆಂದು ಒದಗಿಸಲಾಗಿರುವ 55.00 ಕೋಟಿ ರೂ ಮೊತ್ತದಿಂದಲೇ ಕೊವಿಡ್ ಎರಡನೆ ಅಲೆಯ ತುರ್ತು ಪರಿಹಾರಧನಕ್ಕೂ ಭರಿಸುವಂತೆ ತಿಳಿಸಲಾಗಿದೆ.
ಆಯ್ಯವ್ಯಯದಲ್ಲಿ ಒದಗಿಸಲಾಗಿರುವ ಮೊತ್ತವನ್ನೇ ತುರ್ತುಪರಿಹಾರಕ್ಕೆ ಭರಿಸಿದರೆ ವಖ್ಫ್ ನೋಂದಾಯಿತ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಜಿನ್ ಗಳಿಗೆ ಕೊಡಮಾಡುವ ಮಾಸಿಕ ಗೌರವಧನ ವಿತರಣೆಗೆ ತೊಡಕಾಗಲಿದೆ. ಪ್ರಸ್ತುತ ಎರಡನೆ ಅಲೆಯ ನಿರ್ಬಂಧದಿಂದಾಗಿ ನೊಂದಾಯಿತ ಸಂಸ್ಥೆಗಳ ಇಮಾಮ್ ಮತ್ತು ಮೌಜಿನ್ ಗಳಂತೆಯೇ ಅತಿಹೆಚ್ಚು ಸಂಕಷ್ಟಕ್ಕೊಳಗಾಗಿ ತುರ್ತುಪರಿಹಾರ ಅಗತ್ಯ ಇರುವವರಾಗಿದ್ದಾರೆ ವಖ್ಫ್ ನೊಂದಾಯಿತವಲ್ಲದ ಸಂಸ್ಥೆಗಳ ಪೇಶ್ ಇಮಾಮ್, ಮೌಜಿನ್ ಹಾಗೂ ಮದ್ರಸ ಸಿಬ್ಬಂದಿಗಳು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ವಖ್ಫ್ ಸದಸ್ಯರು, ತುರ್ತು ಪರಿಹಾರಕ್ಕೆ ಪ್ರತ್ಯೇಕ ಸಹಾಯಧನವನ್ನು ವಖ್ಫ್ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಕೋರಿಕೆಯಂತೆ ಒದಗಿಸಿಕೊಡಬೇಕೆಂದು ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಪತ್ರದ ಪೂರ್ಣ ರೂಪ
ರಿಗೆ,
ಶ್ರೀ ಬಿಎಸ್ ಯಡಿಯೂರಪ್ಪ
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ರಾಜ್ಯ
ಉಲ್ಲೇಖ: ಸರ್ಕಾರಿ ಆದೇಶ ಸಂಖ್ಯೆ MWD 51 WES 2021
ವಿಷಯ: ಮಸೀದಿ ಇಮಾಮ್, ಮೌಝಿನ್ ಹಾಗೂ ಮದರಸಗಳ ಸಿಬ್ಬಂದಿಗಳಿಗೆ ತುರ್ತು ಪರಿಹಾರಧನಕ್ಕೆ ವಿಶೇಷ ಸಹಾಯಧನ ನೀಡುವ ಬಗ್ಗೆ
ಮಾನ್ಯರೆ,
ದಿನಾಂಕ 04-06-2021 ರಂದು ರಾಜ್ಯ ವಖ್ಫ್ ಮಂಡಳಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರು ಏಕ ಕಡತ ಪ್ರಸ್ತಾವನೆಯಲ್ಲಿ ರಾಜ್ಯದ 10193 ನೋಂದಾಯಿತ ಹಾಗೂ 1368 ನೊಂದಾಯಿಸದ ಒಟ್ಟು 11561 ಮಸೀದಿಗಳ ಪೇಶ್ ಇಮಾಮಗಳು ಹಾಗೂ ಮೌಜಿನ್ ಗಳಿಗೆ ತಗಲುವ ಅಂದಾಜು ಸಹಾಯಧನದ ಮೊತ್ತ ರೂ.693.66 ಲಕ್ಷಗಳು ಹಾಗೂ ಮದ್ರಸ ಸಿಬ್ಬಂದಿಗಳಿಗೆ 1572 ನೋಂದಾಯಿಸಿದ ಹಾಗೂ 495 ನೋಂದಾಯಿಸದ ಒಟ್ಟು 2067 ಮದರಸಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 5080 ಮುಅಲ್ಲಿಮ್/ಸಿಬ್ಬಂದಿಗಳಿಗೆ ತಗಲುವ ಅಂದಾಜು ಸಹಾಯಧನ ಮೊತ್ತ 152.40 ಲಕ್ಷಗಳು ಒಟ್ಟು 846.00 ಲಕ್ಷಗಳನ್ನು ಮಂಜೂರು ಮಾಡುವಂತೆ ಕೋರಿಕೊಂಡಿದ್ದರು. ಆದರೆ ಸದ್ರಿ ಕೋರಿಕೆಗೆ ಪ್ರತಿಕ್ರಿಯೆ ಎಂಬಂತೆ ದಿನಾಂಕ. 07-06-2021 ರ ಸರ್ಕಾರಿ ಆದೇಶ (ಸಂಖ್ಯೆ MWD 51 WES )ದಲ್ಲಿ ಈಗಾಗಲೇ 2021-22 ಸಾಲಿನ ಆಯವ್ಯಯದಲ್ಲಿ ವಖ್ಫ್ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಜಿನ್ ರಿಗೆ ಸಂಭಾವನೆಗೆಂದು ಒದಗಿಸಲಾಗಿರುವ 55.00 ಕೋಟಿ ರೂ ಮೊತ್ತದಿಂದಲೇ ಕೊವಿಡ್ ಎರಡನೆ ಅಲೆಯ ತುರ್ತು ಪರಿಹಾರಧನಕ್ಕೂ ಭರಿಸುವಂತೆ ತಿಳಿಸಲಾಗಿದೆ.
ಸನ್ಮಾನ್ಮ ಮುಖ್ಯಮಂತ್ರಿಗಳಾದ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ; ಸದ್ರಿ ಸರ್ಕಾರಿ ಆದೇಶ(MWD 51 WES 2021, ದಿನಾಂಕ. 07-06-2021)ವನ್ನು ಮರುಪರಿಶೀಲಿಸಿ ವಖ್ಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕೋರಿಕೆಯಂತೆ ಪ್ರತ್ಯೇಕ ಸಹಾಯಧನ ಮಂಜೂರು ಮಾಡಬೇಕೆಂಬುದು ನಮ್ಮ ಮನವಿಯಾಗಿದೆ. ಆಯ್ಯವ್ಯಯದಲ್ಲಿ ಒದಗಿಸಲಾಗಿರುವ ಮೊತ್ತವನ್ನೇ ತುರ್ತುಪರಿಹಾರಕ್ಕೆ ಭರಿಸಿದರೆ ವಖ್ಫ್ ನೋಂದಾಯಿತ ಸಂಸ್ಥೆಗಳಲ್ಲಿನ ಪೇಶ್ ಇಮಾಮ್ ಮತ್ತು ಮೌಜಿನ್ ಗಳಿಗೆ ಕೊಡಮಾಡುವ ಮಾಸಿಕ ಗೌರವಧನ ವಿತರಣೆಗೆ ತೊಡಕಾಗಲಿದೆ. ಪ್ರಸ್ತುತ ಎರಡನೆ ಅಲೆಯ ನಿರ್ಬಂಧದಿಂದಾಗಿ ನೊಂದಾಯಿತ ಸಂಸ್ಥೆಗಳ ಇಮಾಮ್ ಮತ್ತು ಮೌಜಿನ್ ಗಳಂತೆಯೇ ಅತಿಹೆಚ್ಚು ಸಂಕಷ್ಟಕ್ಕೊಳಗಾಗಿ ತುರ್ತುಪರಿಹಾರ ಅಗತ್ಯ ಇರುವವರಾಗಿದ್ದಾರೆ ವಖ್ಫ್ ನೊಂದಾಯಿತವಲ್ಲದ ಸಂಸ್ಥೆಗಳ ಪೇಶ್ ಇಮಾಮ್, ಮೌಜಿನ್ ಹಾಗೂ ಮದ್ರಸ ಸಿಬ್ಬಂದಿಗಳು. ಆದುದರಿಂದ ಅವರಿಗಾಗಿ ತುರ್ತು ಪರಿಹಾರಕ್ಕೆ ಪ್ರತ್ಯೇಕ ಸಹಾಯಧನವನ್ನು ವಖ್ಫ್ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಕೋರಿಕೆಯಂತೆ ಒದಗಿಸಿಕೊಡುವರೇ ಈ ಮೂಲಕ ಮನವಿ.