janadhvani

Kannada Online News Paper

SSF ಅಂಗೀಕಾರ ಪತ್ರ ಹಸ್ತಾಂತರ

SSF ದಕ್ಷಿಣ ಕನ್ನಡ (ಈಸ್ಟ್) ಜಿಲ್ಲೆಯ ಹಲವು ಶಾಖೆಗಳ ಅಂಗೀಕಾರ ಪತ್ರವನ್ನು ಜಿಲ್ಲಾಧ್ಯಕ್ಷ ಇಬ್ರಾಹಿಂ ಅಮ್ಜದಿ ಮಂಡೆಕೋಲು, ಕಾರ್ಯದರ್ಶಿ ಮುಹಮ್ಮದಲಿ ತುರ್ಕಳಿಕೆ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಆದಿತ್ಯವಾರದಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸಲಾಯಿತು.

ರಾಜ್ಯ ಸಮಿತಿ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಯುನಿಟ್ ಗಳು ಕಡ್ಡಾಯವಾಗಿ ಹೊಸ ಅಂಗೀಕಾರ ಪತ್ರ ಪಡೆಯಲು ಜಿಲ್ಲಾ ಸಮಿತಿ ತಿಳಿಸಿತು.
ಉಪ್ಪಿನಂಗಡಿ ಡಿವಿಷನ್ ನಿಂದ ಹೆಚ್ಚುವರಿ ಸದಸ್ಯರಾಗಿ ಇಸ್ಹಾಕ್ ಮದನಿ ಅಳಕೆ ಇವರನ್ನು ಜಿಲ್ಲಾ ಸಮಿತಿಗೆ ಸೇರ್ಪಡೆಗೊಳಿಸಲಾಯ್ತು.

ಈ ಸಂದರ್ಭದಲ್ಲಿ ಜಿಲ್ಲಾ ನಾಯಕರಾದ
ಅಬ್ದುರ್ರಝಾಕ್ ಬೈರಿಕಟ್ಟೆ,ಅಬೂಬಕ್ಕರ್ ಹಿಮಮಿ ಸಖಾಫಿ ವಿಟ್ಲ, ಅಷ್ಫಾಕ್ ಕೊಡಂಗಾಯಿ,ಹಸನ್ ಸಅದಿ ಕುಕ್ಕಿಲ,ಫೈಝಲ್ ಝುಹ್ರಿ ಕಲ್ಲಗುಂಡಿ,ಇಕ್ಬಾಲ್ ಮಾಚಾರ್, ಇಮ್ರಾನ್ ರೆಂಜಲಾಡಿ,ಜುನೈದ್ ಸಖಾಫಿ ಜೀರ್ಮುಕ್ಕಿ, ಕಲಾಂ ಝುಹ್ರಿ ಬೆಳ್ಳಾರೆ,KS ಹಕೀಂ ಕಳಂಜಿಬೈಲ್, ಮಹಮ್ಮದ್ ಮಿಸ್ಬಾಹಿ,ಮುಸ್ತಫ ಉರುವಾಲ್ಪದವು,ರಶೀದ್ ಮದನಿ,ರಶೀದ್ ಮಡಂತ್ಯಾರ್,ರಝಾಕ್ ಸ ಅದಿ ಕೊಡಿಪ್ಪಾಡಿ,ಶರೀಪ್ ಶಾಝ್ ನಾವೂರು,ಸಿದ್ದೀಕ್ ಗೂನಡ್ಕ, ಉಮರ್ ಅಮ್ಜದಿ ಕುಕ್ಕಿಲ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com