ಕರ್ನಾಟಕ ಕಲ್ಚರಲ್ ಫೌಂಡೇಶನ್ ಜಿದ್ದಾ ಝೋನಲ್ ಅಧೀನದಲ್ಲಿ ಮಾರ್ಚ್ 05ರಂದು ಝೂಮ್ ಮೂಲಕ ಆತೂರ್ ಸಅದ್ ಮುಸ್ಲಿಯಾರ್ ರವರ ಅನುಸ್ಮರಣಾ ಕಾರ್ಯಕ್ರಮ ನಡೆಸಲಾಯಿತು.
ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರ ಮಧ್’ಹ್ ಗಾನದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಮಶ್’ಹೂರ್ ತಲಕ್ಕಿ ತಂಙಳ್ ರವರು ದುಆ ನೆರವೇರಿಸಿದರು.
ಜಿದ್ದಾ ಝೋನಲ್ ಅಧ್ಯಕ್ಷರಾದ ಜನಾಬ್ ಇಬ್ರಾಹಿಮ್ ಕಿನ್ಯಾ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು SSF ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಯ್ಯಿದ್ ಖಾಲಿದ್ ತಂಙಳ್ ರಿಪ್ಪನ್’ಪೇಟೆ ಯವರು ಉದ್ಘಾಟಿಸಿದರು.
ಆತೂರ್ ಸಅದ್ ಉಸ್ತಾದರ ಸಹೋದರರಾದ ಸಿದ್ದೀಕ್ ಸಅದಿ ಆತೂರ್, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ ಹಾಗೂ ನೌಫಲ್ ಮದನಿ ಆತೂರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ ಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್ ಉಸ್ತಾದರು ಆತೂರ್ ಸಅದ್ ಉಸ್ತಾದರ ಬಾಲ್ಯದಿಂದ ವಫಾತಿನ ವರೆಗಿನ ಕಾರ್ಯಾಚರಣೆಗಳ ಚುಟುಕು ವಿವರಣೆಯನ್ನು ಹೇಳುವ ಮೂಲಕ ಅನುಸ್ಮರಣಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಚ್ಚಿಲ ತಂಙಳ್ ರವರು ಖತಮುಲ್ ಕುರ್’ಆನ್ ಹಾಗೂ ತಹ್’ಲೀಲ್ ಸಮರ್ಪಣೆ ಮಾಡಿ ದುಆ ಮಾಡಲಾಯಿತು.
ಶಂಸುದ್ದೀನ್ ಕುಂತೂರ್ ರವರು ಸ್ವಾಗತ ಹೇಳಿದ ಕಾರ್ಯಕ್ರಮವನ್ನು ಮುಹಮ್ಮದ್ ಕಲ್ಲರ್ಬೆ ಯವರು ನಿರೂಪಣೆ ಮಾಡಿ ಸಿದ್ದೀಕ್ ಹಾಜಿ ಬಾಳೆಹೊನ್ನೂರು ರವರು ಧನ್ಯವಾದ ಹೇಳಿದರು.