SSF ನೀರಕಟ್ಟೆ ಶಾಖೆಯ ಮಹಾ ಸಭೆಯು ಡಿ. 7ರಂದು ನೀರಕಟ್ಟೆ ಮದ್ರಸ ಹಾಲ್ ನಲ್ಲಿ ಮಸೀದಿ ಇಮಾಮ್ ಅಬ್ದುಲ್ ಲತೀಫ್ ಮದನಿಯವರ ದುಆದೊಂದಿಗೆ ನಡೆಯಿತು.
SSF ನೀರಕಟ್ಟೆ ಶಾಖೆಯ ಹಿರಿಯ ವ್ಯಕ್ತಿ ಹಾಗೂ ಉಪ್ಪಿನಂಗಡಿ ಡಿವಿಶನ್ ಸದಸ್ಯರಾದ ಇಕ್ಬಾಲ್ KMS ಅಧ್ಯಕ್ಷ ವಹಿಸಿದ್ದರು. SYS ನೀರಕಟ್ಟೆ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲೀಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. SSF ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷರು ಮುಹಮ್ಮದ್ ಮಿಸ್ಬಾಹಿ ಸಂಘಟನಾ ತರಬೇತಿ ನೀಡಿದರು. ನಂತರ ನೂತನ ಸಾರಥಿಗಳ ಆಯ್ಕೆ ಪಕ್ರಿಯೆ ವೀಕ್ಷರಾಗಿ ಆಗಮಿಸಿದ ಸೆಕ್ಟರ್ ಕೊಶಾಧಿಕಾರಿ ರಹೀಂ ವಲಾಲ್ ರವರ ನಾಯಕತ್ವದಲ್ಲಿ ನಡೆಯಿತು.
SYS ನೇತಾರ ಅಬೂಬಕರ್ ಮುಸ್ಲಿಯಾರ್ ಹಾಗು ಸ್ತಳಿಯ ಇಮಾಮ್ ಅಬ್ದುಲ್ ಲತೀಫ್ ಮದನಿ ಬಂಡಾಡ್ SSF ಮೆಂಬರ್ ಶೀಫ್ ವಿಷಯದಲ್ಲಿ ಸರಳವಾಗಿ ವಿವರಿಸಿದರು.
KCF ದಮ್ಮಾಮ್ ನೇತಾರರಾದ ಅನಸ್ ಸಅದಿ ಬೆದ್ರೋಡಿ ಆಶಂಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೀರಕಟ್ಟೆ ಮಸೀದಿ ಅಧ್ಯಕ್ಷ ಹಸನಬ್ಬ ಹಾಗೂ SSF. SYS. KCF ನೇತಾರರು ಭಾಗವಹಿಸಿದ್ದರು.
2020-21 ರ ನೂತನ ಸಾರಥಿಗಳು
ಅದ್ಯಕ್ಷರು ಝುಬೈರ್ ಹಿಮಮಿ
ಪ್ರ.ಕಾರ್ಯದರ್ಶಿ-ಮುಹಮ್ಮದ್ ಹನೀಫ್
ಉಪಾಧ್ಯಕ್ಷ: ನಿಸಾರ್ ಕೆ.ಎಂ.ಎಸ್
ಕಾರ್ಯದರ್ಶಿ: ನಿಹಾದ್ ಎನ್.ಕೆ
ಕೊಶಾಧಿಕಾರಿ:ನೌಶಾದ್ KMS
ಕ್ಯಾಂಪಸ್ ಕಾರ್ಯದರ್ಶಿ: ಸಫ್ವಾನ್
ಹಾಗು 13 ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕೊನೆಗೆ ನೂತನ ಕಾರ್ಯದರ್ಶಿ ಹನೀಫ್ ಎಮ್ ಧನ್ಯವಾದ ಸಲ್ಲಿಸಿದರು.