ಮಂಗಳೂರು :ಭಾನುವಾರ ಕಿನ್ಯ ಗ್ರಾಮದಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ಭಾಷಣ ಮಾಡಿ ಭಾರತದ ಅವಿಭಾಜ್ಯ ಅಂಗವಾದ ಉಳ್ಳಾಲವನ್ನು ಅದರ ಇತಿಹಾಸವನ್ನೇ ಮರೆಮಾಚಿ ಅದನ್ನು ಶತ್ರುರಾಷ್ಟ್ರ ಪಾಕಿಸ್ಥಾನಕ್ಕೆ ಸೇರಿದ್ದೆಂದು ಹೇಳಿಕೆ ನೀಡಿದ್ದನ್ನು ಜಿಲ್ಲಾ ಮುಸ್ಲಿಂ ಲೀಗ್ ಖಂಡಿಸಿದೆ.
16ನೇ ಶತಮಾನದ ದ್ವಿತೀಯಾರ್ಧದಲ್ಲಿ
ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಅನೇಕ ಯತ್ನಗಳನ್ನು ನೆಡೆಸಿದ
ಪೋರ್ಚುಗೀಸರೊಡನೆ ಹೋರಾಡಿ ಅವರಿಗೆ ಸಿಂಹ ಸ್ವಪ್ನರಾದ ಅಬ್ಬಕ್ಕ ರಾಣಿಯ ವಂಶಸ್ತರಾದ ಹಿಂದು ಮುಸ್ಲಿಂ ಕ್ರೈಸ್ತರು ಅನ್ಯೋನ್ಯತೆಯಿಂದ ವಾಸಿಸುವ ಸುಂದರವಾದ ಉಳ್ಳಾಲದಲ್ಲಿ, ಅಬ್ಬಕ್ಕ ರಾಣಿಯ ಕುಲದೈವವಾದ ಸೋಮನಾಥ ದೇವರ ಸುಂದರ ದೇವಾಲಯ ,ಮುಸ್ಲಿಂ ಸಮುದಾಯದ ಪ್ರಸಿದ್ದ ಮಸೀದಿ, ಸಯ್ಯದ್ ಮೊಹಮ್ಮದ್ ಶರೀಫುಲ್ ಮದನಿ ದರ್ಗಾ, ಇಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉರೂಸ್,ಸಂತ ಸಬೇಷ್ಟಿಯನ್ ಚರ್ಚ್, ಚೀರುಂಭ ಭಗವತಿ ಕ್ಷೇತ್ರ, ವೈದ್ಯನಾಥ ಕ್ಷೇತ್ರ, ಶ್ರೀ ಉಳ್ಳಾಲ್ತಿ ಕ್ಷೇತ್ರ, ಪಾಂಡ್ಯ ರಾಜ್ ಬಲ್ಲಾಳ್ ಸಂಸ್ಥೆ, ಮೊಗವೀರ ಶಿಕ್ಷಣ ಸಂಸ್ಥೆಗಳಂತಹ ಸೌಹಾರ್ಧ ಸ್ಥಳಗಳ ಸಂಗಮ ಬೀಡು ಆಗಿದೆ ಉಳ್ಳಾಲ.
ಇಂತಹ ಪ್ರಸಿದ್ಧಿ ಪಡೆದ ಉಳ್ಳಾಲವನ್ನು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಸೇರಿಸಿ ಹೇಳಿಕೆ ನೀಡಿದ್ದು ದೇಶದ್ರೋಹವೇ ಆಗಿದೆ.ಅದೇ ರೀತಿ ಮನೆಯಲ್ಲಿ ಒಂದು ಮಗುವಿದ್ದರೆ ಆ ಮಗು ಸ್ವಾರ್ಥಿಯಾಗುತ್ತದೆ ಎಂದು ಹೇಳಿ ಫ್ರಚೋದಿಸುವಾಗ ತನ್ನ ಸ್ವಂತ ಮಗಳನ್ನೇ ಮರೆತು ಬಿಟ್ಟು, ಮುಗ್ಧ ಹಿಂದೂ ಸಹೊದರರು ಹೆಚ್ಚೆಚ್ಚು ಮಕ್ಕಳನ್ನು ಹೆತ್ತು ಜನಸಂಖ್ಯೆಯನ್ನು ಅಧಿಕಗೊಳಿಸಿ ಎಂದು ಸಾರ್ವಜನಿಕರ ಮುಂದೆ ಭಾಷಣ ಗೆಯ್ಯುವಾಗ ತನ್ನ ಸಂಸ್ಕೃತಿಯನ್ನು ಬಿಂಬಿಸುವಂತಹ ಹಾಸ್ಯಾಸ್ಪದ ಮಾತುಗಳನ್ನಾಡಿ ಅಬ್ಬಕ್ಕ ರಾಣಿಯ ವಂಶಸ್ತರನ್ನು ಗೋಡ್ಸೆ ವಂಶಸ್ತರಾಗಿ ಚಿತ್ರಿಸಿದ್ದು ಖಂಡನೀಯ ಎಂದು ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಪ್ರಭಾಕರ ಭಟ್ಟರ ವಿರುದ್ಧ ಸ್ವಯಂ ಪ್ರೇರಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.