janadhvani

Kannada Online News Paper

ಕೆಸಿಎಫ್ ಖಮೀಸ್ ಮುಶೈತ್: ಮೃತಪಟ್ಟ ಬೆಂಗಳೂರಿನ ವ್ಯಕ್ತಿಯ ಅಂತ್ಯಕ್ರಿಯೆ

ಜಿದ್ದಾ: ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಜಾಫರ್ ಖಾನ್ ಎಂಬವರು ಇತ್ತೀಚೆಗೆ ಹೃದಯಾಘಾತದಲ್ಲಿ ನಿಧನರಾಗಿದ್ದರು.

ಮೃತ ವ್ಯಕ್ತಿಯ ದಫನ ಕಾರ್ಯಕ್ಕಾಗಿ ವಿಷಯವನ್ನು ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಸದಸ್ಯರಾದ ಅಬ್ದುಲ್ ಮುಜೀಬ್ ಬೆಂಗಳೂರು ಹಾಗೂ ಅಸ್ಲಂ ಬೆಂಗಳೂರು ಅವರು ಕೂಡಲೇ ಕೆ ಸಿ ಎಫ್ ಖಮೀಸ್ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬನ್ನೂರು ಅವರ ನೇತೃತ್ವದಲ್ಲಿ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮರಣೋತ್ತರ ಕ್ರಿಯೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಕ್ರೋಢೀಕರಿಸಿ ಅಬ್ದುಲ್ ರಝಾಕ್ ಮದೀನ ಅವರ ಸಹಕಾರದೊಂದಿಗೆ ಆಯಾ ಕಚೇರಿಗಳಿಗೆ ತಲುಪಿಸಿ ಮೃತದೇಹದ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಯಿತು.
ದಿನಾಂಕ 21/9/2017 ರಂದು ಕೆಸಿಎಫ್ ಕಾರ್ಯಕರ್ತರ ಸಹಕಾರದೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಈ ರೀತಿ ಹಲವಾರು ಸಾಂತ್ವನ ಸೇವೆಗಳಿಗೆ ನೇತೃತ್ವವನ್ನು ನೀಡುವ ಕೆಸಿಎಫ್ ಖಮೀಸ್ ಸೆಕ್ಟರ್ ಅಧ್ಯಕ್ಷರು ಹಾಗೂ ಸದಸ್ಯರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

error: Content is protected !! Not allowed copy content from janadhvani.com