ಪುತ್ತೂರು: ಎಸ್ಸೆಸ್ಸೆಫ್ ಶಾಖೆ ಮತ್ತು ಎಸ್.ವೈ. ಎಸ್ ಬನ್ನೂರು ಬ್ರಾಂಚ್ ವತಿಯಿಂದ ಸಾರ್ವಜನಿಕ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ಸೆ.೨೦ರಂದು ಬನ್ನೂರಿನ ಸುನ್ನೀ ಸೆಂಟರ್ನಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಉಮರ್ ತಂಙಳ್ ದುಆ ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವೈ.ಎಸ್. ಬನ್ನೂರು ಬ್ರಾಂಚ್ ಅಧ್ಯಕ್ಷ ಇಸ್ಮಾಯಿಲ್ರವರು ವಹಿಸಿದ್ದರು. ಸೆಕ್ಟರ್ನ ಕೋಶಾಧಿಕಾರಿ ಸೈಫುಲ್ಲಾ ಸಅದಿ ಉದ್ಘಾಟಿಸಿದರು. ಎಸ್.ವೈ.ಎಸ್. ಬನ್ನೂರು ಬ್ರಾಂಚ್ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣಗೈದರು.
ಸುನ್ನೀ ಸೆಂಟರ್ ಅಧ್ಯಕ್ಷ ಫಾರೊಕ್ ಬನ್ನೂರು,
ಕೆ.ಸಿ.ಎಫ್ನ ಬಶೀರ್, ಜಮಾಲ್,ಸೆಕ್ಟರ್ ಪ್ರ.ಕಾರ್ಯದರ್ಶಿ ಶಿಹಾಬುರ್ರಹ್ಮಾನ್, ಎಸ್.ವೈ.ಎಸ್.ನ ಇಬ್ರಾಹಿಂ ಮುಸ್ಲಿಯಾರ್, ಅಬೂಬಕ್ಕರ್, ಶಾಖೆಯ ಅಧ್ಯಕ್ಷ ಜಾಬಿರ್ ಬನ್ನೂರು, ಕಾರ್ಯಕರ್ತರಾದ ಹನೀಫ್ ಬನ್ನೂರು, ಝಾಹೀರ್ ಬನ್ನೂರು, ಹಕ್ಕ್, ಖಾದರ್, ಸಫೀಕ್, ಮುಫೀದ್, ಅಮೀಮ್ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಆಯುಷ್ಮಾನ್ ಕಾರ್ಡ್ ನೋಂದಾವಣಿಯನ್ನು ಶಾಫೀ, ಮುಬೀನ್ರವರು ಮಾಡಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶಾಖೆಯ ಪ್ರ.ಕಾರ್ಯದರ್ಶಿ ಉಲ್ಫಾತುಲ್ಲಾ ಸ್ವಾಗತಿಸಿದರು.