janadhvani

Kannada Online News Paper

ಎಸ್ಸೆಸ್ಸೆಫ್ ಧ್ವಜ ದಿನಾಚರಣೆ

SSF ಎಣ್ಮೂರು ಶಾಖೆ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಜ್ಯದಲ್ಲಿ 1989 ಸೆಪ್ಟೆಂಬರ್ 19ಕ್ಕೆ ಅಸ್ತಿತ್ವಕ್ಕೆ ಬಂತು. ಇದರ ಅಂಗವಾಗಿ ಸಂಘಟನಾ ಧ್ವಜ ದಿನವನ್ನು ಎಣ್ಮೂರು ಶಾಖಾ ವತಿಯಿಂದ ಪಡ್ಪಿನಂಗಡಿ ವಠಾರದಲ್ಲಿ ನಡೆಸಲಾಯಿತು. ಸಂಘಟನೆಯೂ ಬಂದ ಹಾದಿ ಮತ್ತು ಶಾಖಾ ಕಾರ್ಯಚಟುವಟಿಕೆಗಳನ್ನು ಹೇಳುವ ಮೂಲಕ ಮಾಜಿ ಶಾಖಾ ಕಾರ್ಯದರ್ಶಿ ರಹ್ಮಾನ್ ಟಿ ಎಸ್ ಎಣ್ಮೂರು ಕಾರ್ಯಕ್ರಮವನ್ನು ಸ್ವಾಗತಿಸಿ, ಎಸ್ ವೈ ಎಸ್ ಎಣ್ಮೂರು ಬ್ರಾಂಚ್ ಇದರ ಅಧ್ಯಕ್ಷರಾದ ಕೆ ಸಿ ಸುಲೈಮಾನ್ ಮುಸ್ಲಿಯಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ನಂತರ ಎಸ್.ಎಸ್.ಎಫ್ ರಾಜ್ಯ ಸಮಿತಿಯ ಸುತ್ತೋಲೆಯಂತೆ ಸಂಘಟನಾ ಭಿತಿ ಪತ್ರಗಳನ್ನು ಪ್ರದರ್ಶಿಸಲಾಯಿತು. ಎಸ್ ಎಸ್ ಎಫ್ ನಿಂತಿಕಲ್ಲು ಸೆಕ್ಟರ್ ಇದರ ಅಧ್ಯಕ್ಷರಾದ ಜಬ್ಬಾರ್ ಹನೀಫಿ ಅವರು ಕೆಲವು ಹಿತನುಡಿಗಳನ್ನು ಹೇಳುತ್ತಾ ಶಾಖಾ ಸದಸ್ಯರಿಗೆ ಧ್ವಜ ದಿನದ ಶುಭಾಶಯ ಕೋರಿದರು.

error: Content is protected !! Not allowed copy content from janadhvani.com