janadhvani

Kannada Online News Paper

SჄS ಜಿಲ್ಲಾ ಸಮಿತಿ ವತಿಯಿಂದ ಖಾದರ್ ಷಾ ಅವರಿಗೆ ಸನ್ಮಾನ

ಮಂಗಳೂರು: ಇತ್ತೀಚೆಗೆ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಇದರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಆಯ್ಕೆಗೊಂಡ ಪ್ರಸ್ತುತ ಜಿಲ್ಲಾ ವಾರ್ತಾಧಿಕಾರಿ ಕೂಡಾ ಆಗಿರುವ ಖಾದರ್ ಷಾ ರವರನ್ನು ಇತ್ತೀಚೆಗೆ ಅವರ ಕಚೇರಿಯಲ್ಲಿ SჄS ದ.ಕ.ವೆಸ್ಟ್ ಜಿಲ್ಲೆ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಿ.ಎಚ್. ಮಹಮ್ಮದ್ ಅಲಿ ಸಖಾಫಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಬೋಳಂತೂರು, ಕೋಶಾಧಿಕಾರಿ ಎಸ್ಎಂ ಬಶೀರ್ ಹಾಜಿ SჄS ರಾಜ್ಯ ನಾಯಕ ಬಿಜಿ ಹನೀಫ್ ಹಾಜಿ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಎಂಕೆಎಂ ಇಸ್ಮಾಯಿಲ್ ಕಿನ್ಯ ಜಿಲ್ಲಾ ಸದಸ್ಯ ಉಮರ್ ಫಾರೂಕ್ ಶೇಡಿಗುರಿ, ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com