ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ 176ನೇ ರಕ್ತದಾನ ಶಿಬಿರವು ದಿನಾಂಕ 06-09-2020 ರಂದು ಗೌಸಿಯಾ ಕಮ್ಯುನಿಟಿ ಹಾಲ್ , ಮೋಂಟುಗೋಳಿ ಯಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರು ಬಹು.ಮನ್ಸೂರ್ ಹಿಮಾಮಿ ಅಧ್ಯಕ್ಷತೆ ವಹಿಸಿದರು. ಸ್ಥಳೀಯ ಜಮಾತಿನ ಖತೀಬರು ರಾದ ಬಹು.ಅಬೂಬಕ್ಕರ್ ಸಅದಿ ದುಆ ನೇರೆವೇರಿಸಿದರು. ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ವಕ್ಪ್ ಅಧಿಕಾರಿ ಅಬೂಬಕ್ಕರ್ ಮೋಂಟುಗೋಳಿ, ಸ್ಥಳೀಯ ಖತೀಬರು ಅಬೂಬಕ್ಕರ್ ಸಹದಿ , ರಹಿಮಾನ್ ಮರಿಕ್ಕಲ, ಪ್ರಾಸ್ತಾವಿಕ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ SYS ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಲ್ ಹಾಜ್ ಉಸ್ಮಾನ್ ಸಅದಿ ಉಸ್ತಾದ್ ರನ್ನು ಸನ್ಮಾನಿಸಲಾಯಿತು.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಮ್ ಮುಸ್ತಫಾ ನಈಮಿ ಮೋಂಟುಗೋಳಿ, ಮುಖ್ಯ ಅತಿಥಿಯಾಗಿ ಸ್ಥಳೀಯ ಜಮಾತಿನ ಖತೀಬರು, ಅಧ್ಯಕ್ಷರು, ಸೆಕ್ಟರ್ ನಾಯಕರು ಮುಂತಾದವರು ಉಪಸ್ಥಿತಿದ್ದರು. ಈ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನಿಗಳನ್ನು ಕಳುಹಿಸಿ ಕೊಟ್ಟ ಮೋಂಟುಗೋಳಿ ಶಾಖೆಗೆ ಅರ್ವಾಡ್ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸುಲೈಮಾನ್ ಮೋಂಟುಗೋಳಿ, ಅಬೂಬಕ್ಕರ್ ಮೋಂಟುಗೋಳಿ, ಇಲ್ಯಾಸ್ ಪೊಟ್ಟೋಳಿಕೆ, ಝಕರಿಯಾ ಮೋಂಟುಗೋಳಿ, ಹೈದರ್ ಲತೀಫಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಸೆಕ್ಟರ್ ಪ್ರ.ಕಾರ್ಯದರ್ಶಿ ಮಹಮ್ಮದ್ ನಿಯಾಜ್ ಪಡಿಕ್ಕಲ್, ಉಪಾಧ್ಯಕ್ಷರು ರಾದ ನಾಸೀರ್ ಮೋಂಟುಗೋಳಿ, ಶರೀಫ್ ವಿದ್ಯಾನಗರ, ಮಜೀದ್ ಮರಿಕ್ಕಲ , ಕಾರ್ಯದರ್ಶಿ ಯಾಝೀದ್ ಮರಿಕ್ಕಲ,ಕ್ಯಾ.ಕಾರ್ಯದರ್ಶಿ ಸಮದ್ ಮೊಂಟೆಪದವು, ಬ್ಲಡ್ ಸೈಭೋ ಸೆಕ್ಟರ್ ಉಸ್ತುವಾರಿ ಹನೀಫ್ ಕಲ್ಲರ್ಬೆ, ಸೆಕ್ಟರ್ ನಾಯಕರು ಹಾಗೂ ಶಾಖಾಗಳ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಸುತ್ತ ರಕ್ತದಾನ ಶಿಬಿರದಲ್ಲಿ ಒಟ್ಟು 87 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.SSF ಸೆಕ್ಟರ್ ಕಾರ್ಯದರ್ಶಿ ನಾಝಿಮ್ ಸ್ವಾಗತಿಸಿದರು ಮಹಮ್ಮದ್ ಸಿನಾನ್ ಸುಟ್ಟ ವಂದಿಸಿದರು.