janadhvani

Kannada Online News Paper

ಎಸ್ಸೆಸ್ಸೆಫ್ ಕಳಂಜಿಬೈಲ್ ಸ್ವಚ್ಚತಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಕಳಂಜಿಬೈಲ್ ಶಾಖೆ ವತಿಯಿಂದ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮಕ್ಕೆ ಎಂ.ಜೆ.ಎಂ ಖತೀಬರಾದ ಬಹು: ಬಿ.ವೈ ಅಬ್ದುಲ್ ಹಮೀದ್ ಸಅದಿ ಬೇಂಗಿಲ ದುಆ ನಿರ್ವಹಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ವಚ್ಛತಾ ಕಾರ್ಯಕ್ರಮವು ಕಳಂಜಿಬೈಲ್ ಮಸೀದಿ ಸುತ್ತ-ಮುತ್ತಲಿನಲ್ಲಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿ,ಮಸೀದಿಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಹುಲ್ಲು ಗಿಡಗಳನ್ನು ತೆಗೆಯುವುದರ ಮೂಲಕ, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯನ್ನು ಮಾಡಲಾಯಿತು. ಬೆಳಿಗ್ಗೆಯಿಂದ ಆರಂಭವಾದ ಸ್ವಚ್ಚತಾ ಕಾರ್ಯಕ್ರಮವು ಸಂಜೆ ತನಕ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರು ಮತ್ತು ಎಸ್ ವೈಎಸ್ ಅಧ್ಯಕ್ಷರಾದ ಕೆ.ಹೆಚ್ ಅಬೂಬಕ್ಕರ್
ಎಸ್ಸೆಸ್ಸೆಫ್ ಅಧ್ಯಕ್ಷರಾದ ಕೆ.ವಿ ಲತೀಫ್ ಸಅದಿ, ಕಾರ್ಯದರ್ಶಿ ಜಾಬಿರ್ ಕೆ.ಪಿ ಹಾಗೂ ಎಸ್.ವೈ.ಎಸ್ ನಾಯಕರೂ ಎಸ್ಸೆಸ್ಸೆಫ್ ಕಾರ್ಯ ಕರ್ತರೂ ಜಮಾಅತ್ ಹಿರಿಯರೂ ಮುತಅಲ್ಲಿಮರೂ ಭಾಗವಹಿಸಿದರು.

error: Content is protected !! Not allowed copy content from janadhvani.com