janadhvani

Kannada Online News Paper

ಎಸ್ಕೆಎಸ್ಸೆಸ್ಸೆಫ್ ಜಿಸಿಸಿ, ಕೊಡಗು- ಪ್ರಬಂಧ ಸ್ಪರ್ಧೆ ದಿನಾಂಕ ವಿಸ್ತರಣೆ

ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ – ಕೊಡಗು ಆಶ್ರಯದಲ್ಲಿ “ಸಾಮಾಜಿಕ ಜಾಲತಾಣ; ಒಳಿತು – ಕೆಡುಕು” ಎಂಬ ವಿಷಯದ ಕುರಿತು ಮುಕ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಹಿಂದೆ ಪ್ರಬಂಧಗಳನ್ನು ಕಳುಹಿಸಲು ದಿನಾಂಕ 03-08-2020 ಕೊನೆಯ ದಿನವಾಗಿತ್ತು. ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಇದನ್ನು ದಿನಾಂಕ 10-08-2020 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ- ಕೊಡಗು ಅಧ್ಯಕ್ಷ ಹುಸೈನ್ ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ವಯೋಮಿತಿಯವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು;
ಕನ್ನಡ,ಇಂಗ್ಲೀಷ್, ಮಲಯಾಳಂ ಭಾಷೆಗಳಲ್ಲಿ ಇರುತ್ತದೆ. ಲೇಖನಗಳನ್ನು ದೂರವಾಣಿ (Whatsapp) ಸಂಖ್ಯೆ +971563210719 ಅಥವಾ ಈ ಮೇಲ್ ವಿಳಾಸ kodaguskssfgcc@gmail.com ಗೆ ಕಳುಹಿಸತಕ್ಕದ್ದು. ಅತ್ಯುತ್ತಮ ಲೇಖನಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com