janadhvani

Kannada Online News Paper

SYS ಅಮ್ಮುಂಜೆ ಸೆಂಟರ್: ಕೋವಿಡ್ 19 ಕುರಿತು ಟೀಂ ಇಸಾಬ ತರಬೇತಿ ಶಿಬಿರ

ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಅಮ್ಮುಂಜೆ ಸೆಂಟರ್ ವತಿಯಿಂದ ಕೋವಿಡ್ 19 ಕುರಿತು ಟೀಂ ಇಸಾಬ ತರಬೇತಿ ಶಿಬಿರವು ಬಡಕಬೈಲು ಸೆಂಟರ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಅಮ್ಮುಂಜೆ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಸಖಾಫಿ ಅಮ್ಮಂಜೆ ವಹಿಸಿದರು. ಬಡಕಬೈಲು ಬ್ರಾಂಚ್ ಅಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್ ಪ್ರಾರ್ಥನೆ ನಡೆಸಿದರು.

ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಸೆಂಟರ್ ವ್ಯಾಪ್ತಿಯ ಅಮ್ಮುಂಜೆ, ಮಲ್ಲೂರು, ಬಡಕಬೈಲು, ಉದ್ದಬೆಟ್ಟು ಬ್ರಾಂಚ್ ಇಸಾಬ ಸದಸ್ಯರು ಭಾಗವಹಿಸಿದರು. ಸೆಂಟರ್ ಇಸಾಬ ಕಾರ್ಯದರ್ಶಿ ಅಬೂಬಕರ್ ಸ್ವಾಗತಿಸಿ, ಸೆಂಟರ್ ಸಾಂತ್ವನ ಕಾರ್ಯದರ್ಶಿ ಮಹಮ್ಮದ್ ಬಡಕಬೈಲು ಕೃತಜ್ಞತೆ ಸಲ್ಲಿಸಿದರು.

error: Content is protected !! Not allowed copy content from janadhvani.com