ಸೂರತ್: ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಗುಜರಾತ್ ಆರೋಗ್ಯ ಸಚಿವನ ಪುತ್ರ ಬೆದರಿಕೆ ಒಡ್ಡಿ ಕೊನೆಗೆ ಮಹಿಳಾ ಪೇದೆ ಸ್ವಯಂ ರಾಜೀನಾಮೆ ನೀಡಿ ಹುದ್ದೆ ತೊರೆದ ಗಂಭೀರ ಪ್ರಕರಣವೊಂದು ಸೂರತ್ ನಿಂದ ವರದಿಯಾಗಿದೆ.
ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಸುನೀತಾ ಯಾದವ್ ಎಂಬ ಮಹಿಳಾ ಪೇದೆ ರಾತ್ರಿ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಗುಜರಾತ್ ಆರೋಗ್ಯ ಮಂತ್ರಿ ಕುಮಾರ್ ಕನಾನಿ ಯವರ ಮಗ ಪ್ರಕಾಶ್ ನ ಕಾರನ್ನು ತಡೆದು ವಿಚಾರಿಸಿದ ಸಂದರ್ಭ ನಡೆದ ಮಾತಿನ ಸಮರದ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿದೆ. ಈ ಆಡಿಯೋದಲ್ಲಿ ವ್ಯಕ್ತಿಯೊಬ್ಬ ಸುನೀತಾ ಯಾದವ್ ರಿಗೆ “ನಿನ್ನನ್ನು ಇದೇ ಜಾಗಲ್ಲಿಯೇ 365 ದಿನ ಕರ್ತವ್ಯ ನಿರ್ವಹಿಸುವಂತೆ ಮಾಡುವ ಅಧಿಕಾರ ನನ್ನಲ್ಲಿದೆ” ಎಂದು ಬೆದರಿಕೆ ಒಡ್ಡುತ್ತಿರುವುದು ಕೇಳಿ ಬರುತ್ತದೆ.
ಈ ಸಂದರ್ಭ ತನ್ನ ಮೇಲಧಿಕಾರಿಯನ್ನು ಫೋನ್ ಮೂಲಕ ಸಂಪರ್ಕಿಸಿದ ಪೊಲೀಸ್ ಪೇದೆಗೆಯೇ ಬುದ್ದಿ ಹೇಳಿದ ಮೇಲಧಿಕಾರಿ ಸುನೀತಾ ಯಾದವ್ ರಿಗೆ ಸ್ಥಳದಿಂದ ಹೋಗುವಂತೆ ಅಜ್ಞಾಪಿಸಿದ್ದಾರೆ ಘಟನೆಯಿಂದ ಮನ ನೊಂದ ಪೊಲೀಸ್ ಪೇದೆ ಮರುದಿವಸ ತನ್ನ ಹುದ್ದೆಗೆ ಸ್ವಯಂ ರಾಜೀನಾಮೆ ನೀಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ಬುಧವಾರ ರಾತ್ರಿ 10.30ಕ್ಕೆ ಮಂಗಾಧ್ ಚೌಕ್ ನಲ್ಲಿ ನಡೆದಿತ್ತು.
ಭೇಟಿ ಬಚಾವೋ ಆಂದೋಲನದ ಮೂಲಕ ಹೆಸರುವಾಸಿಯಾಗಲು ಶ್ರಮ ನಡೆಸುತ್ತಿರುವ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಇಂತಹ ಘಟನೆ ನಡೆಯುತ್ತಿರುವುದು ಮಾತ್ರವಲ್ಲದೆ ಪ್ರಧಾನಿಯ ತವರೂರಾದ “ಗುಜರಾತ್ ಮಾಡೆಲ್” ರಾಜ್ಯದಲ್ಲಿಯೇ ಇಂತಹ ಘಟನೆ ನಡೆಯುವುದು ಅವಮಾನಕರ ಮತ್ತು ಅಮಾನವೀಯ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ