ದುಬೈ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮೊಟಕುಗೊಂಡಿದ್ದು ಯುಎಯಿ ಯಿಂದ ಭಾರತಕ್ಕೆ ರಜಾ ನಿಮಿತ್ತ ಮತ್ತು ಇತರ ಕಾರಣಗಳಿಂದ ಬಂದು ಬಾಕಿಯಾಗಿರುವ ಅನಿವಾಸಿಗಳಿಗೆ ಜುಲೈ 12 ರಿಂದ ವಾಪಾಸು ಹೋಗುವ ಅವಕಾಶ ನೀಡಲಾಗಿದೆ. ಈ ಸಂಭಂದ ಈಗಾಗಲೇ 4 ವಿಮಾನಯಾನ ಕಂಪನಿಗಳು ವಿವಿಧ ವಿಮಾನ ನಿಲ್ದಾಣಗಳಿಂದ ವಿಮಾನದ ವೇಳಾಪಟ್ಟಿಯನ್ನು ಪ್ರಕಟಿಸಿವೆ.
ಏರ್ ಇಂಡಿಯಾ ಎಕ್ಸ್ಪ್ರೆಸ್
ಕಣ್ಣೂರು – ದುಬೈ, ತಿರುವನಂತಪುರಂ-ದುಬೈ, ಕೋಝಿಕೋಡ್-ಶಾರ್ಜಾ, ಡೆಲ್ಲಿ-ಅಬುಧಾಬಿ, ಡೆಲ್ಲಿ-ಶಾರ್ಜಾ ವಿಮಾನಗಳು ಆದಿತ್ಯವಾರ ಹಾರಲಿದೆ.
ಎಮಿರೇಟ್ಸ್
ಬೆಂಗಳೂರು, ಡೆಲ್ಲಿ, ಕೊಚ್ಚಿ, ಮುಂಬೈ, ತಿರುವನಂತಪುರಂ ನಿಂದ ದುಬೈ ಗೆ ಹಲವು ವಿಮಾನಯಾನ ಸೇವೆ ನೀಡಲಿದೆ.
ಏರ್ ಅರೇಬಿಯಾ
ಅಹಮದಾಬಾದ್, ಬೆಂಗಳೂರು, ಕೊಯಂಬತ್ತೂರು, ಡೆಲ್ಲಿ, ಕಣ್ಣೂರು, ಕೊಚ್ಚಿ, ಕೋಝಿಕೋಡ್, ತಿರುವನಂತಪುರಂ, ಲಕ್ನೋ, ಮುಂಬೈ ನಗರಗಳಿಂದ ಶಾರ್ಜಾಗೆ ಸೇವೆ ನೀಡಲಿವೆ.
ಸ್ಪೈಸ್ ಜೆಟ್
ಡೆಲ್ಲಿ, ಮುಂಬೈ, ಕೋಝಿಕೋಡ್, ಕೊಚ್ಚಿಬಿಯಿಂದ ರಾಸ್ ಅಲ್ ಖೈಮಾಗೆ ಸೇವೆ ನೀಡಲಿವೆ.
ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು 96 ಗಂಟೆಗಳ ಮೊದಲು ನಡೆಸಿದ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರತಕ್ಕದ್ದು, ಐಸಿಎ/ರೆಸಿಡೆನ್ಸಿ ಇಲಾಖೆಯ ಅನುಮತಿ ಪತ್ರ ಹೊಂದಿರಬೇಕು, ಸ್ಥಿರ ಆರೋಗ್ಯ ಘೋಷಣಾ ಪತ್ರ ಹೊಂದಿರಬೇಕು, ಕೋವಿಡ್ 19 DXB ಅಥವಾ ಅಲ್ ಹೊಸ್ನ್ ಆಪ್ ಹೊಂದಿರಬೇಕು, ಕ್ವಾರಂಟೈನ್ ಗೆ ಬದ್ಧರಾಗುವ ದೃಢೀಕರಣವನ್ನೂ ನೀಡಬೇಕಿದೆ















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?