janadhvani

Kannada Online News Paper

ಕಕ್ಯಪದವು ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ವತಿಯಿಂದ ಸಹಾಯಧನ ಹಸ್ತಾಂತರ.

ಕಕ್ಯಪದವು ನಾಡಿನ ಬಡವರ ಆಶಾಕಿರಣ ವಾಗಿ ನೊಂದವರ ಪಾಲಿಗೆ ಸಾಂತ್ವನವಾಗಿ ಕಾರ್ಯಚರಣೆ ನಡೆಸುವ “ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್”. ಹಲವಾರು ವರ್ಷಗಳಿಂದ ಗ್ರೂಪ್‌ ಅಡ್ಮಿನ್ ಗಳ ಕಠಿಣ ಪರಿಶ್ರಮದಿಂದ ಹಾಗೂ ಸದಸ್ಯರ ಸಹಕಾರದಿಂದ ಊರಿನ ಬಡವರ ಕಣ್ಣೀರು ಒರೆಸುವ ಕಾರ್ಯಾಚರಣೆಯು ಜನರ ಮಧ್ಯೆ ಬಹಳ ಮೆಚ್ಚುಗೆಯನ್ನು ಗಳಿಸಿದೆ.

ಇದರ ಭಾಗವಾಗಿ 15/6/2020 ರಂದು ಕಕ್ಯಪದವು ಜಮಾಹತಿಗೆ ಒಳಪಟ್ಟ ಬಿತ್ತ ನಿವಾಸಿ ದಾವೂದಕ ಎಂಬವರ ಮಗಳ ಮದುವೆ ಕಾರ್ಯಕ್ರಮಕ್ಕೆ ಕಕ್ಯಪದವು ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ನ ಸರ್ವ ಸದಸ್ಯರ ಸಹಕಾರದಿಂದ ಬರೀ ಹದಿನೈದು ದಿನಗಳಲ್ಲಿ ಶೇಖರಿಸಲ್ಪಟ ಬೃಹತ್ ಮೊತ್ತ ವಾದ “63,647” ರೂಪಾಯಿಯನ್ನು ಮದುವೆಯ ಸಹಾಯ ಧನವಾಗಿ ಬಿತ್ತ ದಾವೂದಕರ ಕೈಗೆ ಹಸ್ತಾಂತರಿಸಲಾಯಿತು.

ಪ್ರಸ್ತುತ ಆ ಸಂದರ್ಭದಲ್ಲಿ ಮಾತನಾಡಿದ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಲ್ಲಿ ಒಬ್ಬರಾದ ಸ್ವಾದಿಖ್ ಸಖಾಫಿ ಪೇರಲಗುಲಿ ರವರು ಗ್ರೂಪ್‌ನ ಸರ್ವ ಸದಸ್ಯರ ಸಹಕಾರದಿಂದಲೇ ನಮ್ಮ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್ ಈ ಮಟ್ಟಕ್ಕೆ ಬೆಳೆಯಲು ಹಾಗೂ ಊರಿನ ಬಡಜನರನ್ನು ಗುರುತಿಸಿ ಅವರಿಗೆ ಬೇಕಾದ ರೀತಿಯಲ್ಲಿ ಸ್ಪಂದಿಸಲು ಕಾರಣವಾಗುತ್ತದೆ ಎಂದು ಗ್ರೂಪ್‌ನ ಸಹ ಸದಸ್ಯರ ಕುರಿತು ಅಭಿಮಾನವನ್ನು ವ್ಯಕ್ತಪಡಿಸಿದರು.

ಧನಸಹಾಯವನ್ನು ಸ್ವೀಕರಿಸಿ ಬಳಿಕ ಮಾತಾನಾಡಿದ ಬಿತ್ತ ದಾವೂದಕ ರವರು ಧನ ಮೂಲಕ ಸಹಾಯ ಮಾಡಿದ ನಸೀಹತ್ ಕ್ಲಾಸ್ ವಾಟ್ಸಪ್ ಗ್ರೂಪ್‌ನ ಸದಸ್ಯರಿಗೆ ಅಲ್ಲಾಹನು ಅರ್ಹವಾದ ಪ್ರತಿಫಲವನ್ನು ನೀಡಲಿ ಎಂದು ದುಹಾಃ ಮಾಡಿದರು. ಗ್ರೂಪ್‌ನ ಸಹ ಸದಸ್ಯರಾದ ಕರೀಂ ಕುಂಜಲಿಕೆ, ಅನ್ಸಾರ್ ಪಡಿಲ್ ಬೆಟ್ಟು, ಹಾರಿಸ್ ಕಕ್ಯಪದವು ಹಾಗೂ ಅಝೀಝ್ ಕುಂಜಲಿಕೆ ರವರು ಉಪಸ್ಥಿತರಿದ್ದರು..

ವರದಿ : ಅಶ್ರಫ್ ಕಟ್ಟದಪಡ್ಪು.

error: Content is protected !! Not allowed copy content from janadhvani.com