janadhvani

Kannada Online News Paper

ಅನಿವಾಸಿ ಕನ್ನಡಿಗರನ್ನು ಆತ್ಮೀಯವಾಗಿ ಬೀಳ್ಕೊಟ್ಟ ಕೆಸಿಎಫ್ ಒಮಾನ್

ಒಮಾನ್:ಕೋವಿಡ್-19 ಕೊರೊನಾವೈರಸ್ ಹಿನ್ನಲೆ ವಿದೇಶಗಳಲ್ಲಿ ಸಿಲುಕಿರುವ ಅನಿವಾಸಿಗಳನ್ನು ಸ್ವದೇಶಕ್ಕೆ ಕರೆತರುವ ವಂದೇ ಭಾರತ್ ಮಿಷನ್ ನ ಭಾಗವಾಗಿ ಇಂದು ಒಮಾನ್ ಮಸ್ಕತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಪ್ರಥಮ ವಿಮಾನವು ಹೊರಟಿತು.

ಶೇಕಡಾ ಐವತ್ತಕ್ಕೂ ಹೆಚ್ಚಿನ ಅನಿವಾಸಿ ಪ್ರಯಾಣಿಕರಿಗೆ ಸೇಫ್ಟಿ ಮತ್ತು ಇಫ್ತಾರ್ ಕಿಟ್ ವಿತರಣೆ ಹಾಗೂ ಸೇಫ್ಟಿ ಗೈಡ್‌ ನ್ನು ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಒಮಾನ್ ವತಿಯಿಂದ ನೀಡಲಾಯಿತು. ಅವರಿಗೆ ಬೇಕಾದ ಮಾಹಿತಿ, ಸಲಹೆಗಳನ್ನು ನೀಡಿ ಅವರನ್ನು ಹುರಿದುಂಬಿಸಿದರು.

ಸಂಕಷ್ಟದಲ್ಲಿ ಸಿಲುಕಿರುವ ಅನಿವಾಸಿಗಳಿಗೆ ಸಾಂತ್ವನ ಕಾರ್ಯದಲ್ಲಿ ಜೊತೆಗಿದ್ದು ಸದಾ ಸಹಕರಿಸುತ್ತಿರುವ ಕೆಸಿಎಫ್ ಮತ್ತು ಐಸಿಎಫ್ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಲಾಯಿತು.

error: Content is protected !! Not allowed copy content from janadhvani.com