janadhvani

Kannada Online News Paper

ಸೌದಿ: ಭಾರತಕ್ಕೆ ಮರಳುವವರ ಪಟ್ಟಿಯನ್ನು ರಾಯಭಾರ ಕಚೇರಿ ಸಿದ್ಧಪಡಿಸುತ್ತಿದೆ

ರಿಯಾದ್: ಸೌದಿ ಅರೇಬಿಯಾದಿಂದ ಭಾರತಕ್ಕೆ ಮರಳಲು ಬಯಸುವವರ ಪಟ್ಟಿಯನ್ನು ರಾಯಭಾರ ಕಚೇರಿ ಸಿದ್ಧಪಡಿಸುತ್ತಿದೆ. ಕೇಂದ್ರ ಸರಕಾರವು ಸೌದಿಯಲ್ಲಿ ಸಿಲುಕಿರುವವರ ಒತ್ತಡಕ್ಕೆ ಮಣಿದು ಕ್ರಮವನ್ನು ತ್ವರಿತಗೊಳಿಸಿದೆ.

ಅನಿವಾಸಿಗಳ ಪೈಕಿ ದೇಶಕ್ಕೆ ಮರಳಲು ಬಯಸುವವರನ್ನು ಶೀಘ್ರದಲ್ಲೇ ಕರೆದೊಯ್ಯಲಾಗುವುದು ಎಂದು ವರದಿಗಳು ತಿಳಿಸಿವೆ. ಮುಂದಿನ ವಾರ, ಭಾರತೀಯರನ್ನು ಕೊಂಡೊಯ್ಯಲು ಪ್ರಾರಂಭಿಸಬಹುದು. ಈ ಕುರಿತು ಶೀಘ್ರದಲ್ಲೇ ಅಂತಿಮ ಪ್ರಕಟನೆ ನೀಡಲಾಗುವುದು.ಗರ್ಭಿಣಿ ಮತ್ತು ವೃದ್ಧರಿಗೆ ಆದ್ಯತೆ ನೀಡಲಾಗುತ್ತದೆ.

ಹೋಗಲು ಬಯಸುವವರ ಪಟ್ಟಿಯನ್ನು ಭಾರತೀಯ ರಾಯಭಾರ ಕಚೇರಿ ಸಿದ್ಧಪಡಿಸುತ್ತಿದ್ದು, ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಬಹುದು: https://t.co/K5Hbmr4cFP

ಹೋಗಲು ಬಯಸುವವರ ಪಟ್ಟಿಯನ್ನು ಸಿದ್ಧಪಡಿಸುವುದು ಗುರಿಯಾಗಿದ್ದು, ವಿಮಾನಯಾನ ಸಂಸ್ಥೆಗಳು ಮುಂದಿನ ವಾರ ತನ್ನ ವಿಮಾನಯಾನಗಳನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ. ಈಗಾಗಲೇ ಸೌದಿ ಕಂಪನಿಗಳಲ್ಲಿ ನೋಂದಾಯಿಸಿಕೊಂಡವರಿಗೆ ಮುಂದಿನ ವಾರದಲ್ಲಿ ಪ್ರಯಾಣ ಪ್ರಾರಂಭವಾಗಲಿದೆ.

error: Content is protected !! Not allowed copy content from janadhvani.com