ಮನಾಮ: ಬಹರೈನಿನಲ್ಲಿ ಉದ್ಯೋಗದಲ್ಲಿದ ಕೆ.ಸಿ.ಎಫ್ ಬುದಯ್ಯ ಸೆಕ್ಟರ್ ಕಾರ್ಯಕರ್ತ ಮುಹಮ್ಮದ್ ರಫೀಕ್ ಕಿನ್ಯ ಅವರ ಪತ್ನಿ ಶಂಶಾದ್ ಅಮ್ಮೆಂಬಳ ಅವರು ನಿನ್ನೆ ಹೃದಯಾಘಾತದಿಂದ ಬಹರೈನ್ ಸಾರ್ ಅಮೇರಿಕನ್ ಹಾಸ್ಪಿಟಲ್ ನಲ್ಲಿ ನಿಧನ ಹೊಂದಿದ್ದರು.
ಬಹರೈನ್ ಕೆ.ಸಿ.ಎಫ್ ಸಾಂತ್ವನ ವಿಭಾಗದ ನೇತೃತ್ವದಲ್ಲಿ ನಿಯೋಗವೊಂದು ರಫೀಕ್ ಕಿನ್ಯರವರನ್ನು ಭೇಟಿ ಮಾಡಿ ಸಾಂತ್ವಾನ ಪಡಿಸಿ, ಜನಾಝ ಅಂತ್ಯ ಕ್ರಿಯೆಗೆ ಬೇಕಾದ ಎಲ್ಲಾ ಅಧಿಕೃತ ಧಾಖಲೆಗಳನ್ನು ಸಂಬಂಧ ಪಟ್ಟ ಇಲಾಖೆಗಳಿಂದ ಸಂಗ್ರಹಿಸಿತು.
ಎಲ್ಲಾ ವಿಧಿವಿಧಾನದಂತೆ ಶಂಶಾದ್ ರವರ ಜನಾಝವನ್ನು, ಮಹಾನುಭಾವರಾದ ಶೈಖ್ ಮುಹಮ್ಮದ್ ಇಬ್ನು ಯಅಖೂಬ್ ಇಜಾಝಿ (ನ.ಮ) ರವರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಬುಸೈತಿನ್ ಮಸ್ಜಿದ್ ದಫನ ಭೂಮಿಯಲ್ಲಿ ದಫನಗೈಯಲಾಯಿತು.
ಆರೋಗ್ಯಮತಿಯಾಗಿದ್ದ ಶಂಶಾದ್, ಮಗುವಿಗೆ ಆಹಾರವನ್ನು ನೀಡುತ್ತಿದ್ದ ವೇಳೆ ಹೃದಯಾಘಾತಗೊಂಡು ಬಹರೈನಿನ ಸಾರ್ ಅಮೆರಿಕನ್ ಹಾಸ್ಪಿಟಲಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾದರು.
ಎರಡು ವರ್ಷ ಪ್ರಾಯದ ಮಗು ಸೇರಿದಂತೆ 2 ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊಂದಿದ್ದರು.
ಆ ಮಾತೆಯ ಪಾರತ್ರಿಕ ಜೀವನವನ್ನು ಸಂತೋಷಮಯಗೊಳಿಸಲಿ.ಅವರ ಕುಟುಂಬಕ್ಕೆ ಅಲ್ಲಾಹು ಶಾಂತಿ ಸಮಾಧಾನವನ್ನು ಕರುಣಿಸಲಿ.ಸುನ್ನೀ ಸಂಘ ಕುಟುಂಬದ ಎಲ್ಲಾ ಕಾರ್ಯಕರ್ತರು ಮೃತರ ಹೆಸರಿನಲ್ಲಿ ಖುರ್ಆನ್, ಯಾಸೀನ್ ಪಾರಾಯಣ ತಹ್ಲೀಳ್ ಹೇಳಿ ಮಗ್ಫಿರತ್ಗಾಗಿ ದುವಾ ಮಾಡ ಬೇಕಾಗಿ ಬಹರೈನ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯು ವಿನಂತಿಸಿಕೊಂಡಿದೆ.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ