ದೋಹಾ: ಕರೆನ್ಸಿ ಮತ್ತು ಚಿನ್ನಾಭರಣಗಳಂತಹ ದುಬಾರಿ ವಸ್ತುಗಳನ್ನು ದೇಶಕ್ಕೆ ತರುವುದು ಮತ್ತು ದೇಶದಿಂದ ಸಾಗಿಸುವುದಕ್ಕೆ ಖತರ್ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.
ಐವತ್ತು ಸಾವಿರ ಖತರ್ ರಿಯಾಲ್ ಮೌಲ್ಯದ ಸರಕುಗಳನ್ನು ಯಾವುದೇ ಮಾರ್ಗದಿಂದ ಸಾಗಿಸುವವರಾದರೂ ಕೂಡ ಕಸ್ಟಮ್ಸ್ ಇಲಾಖೆಯ ವಿಶೇಷ ಸರಕು ಅಫಿಡವಿಟ್ ಅನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ.
ಕಪ್ಪುಹಣವನ್ನು ಸಕ್ರಮಗೊಳಿಸುವುದು ಮತ್ತು ಭಯೋತ್ಪಾದಕರಿಗೆ ಹಣಕಾಸು ಸಹಾಯ ನೀಡುವುದನ್ನು ನಿಗ್ರಹಿಸಲು ಖತರ್ ಜಾರಿಗೊಳಿಸಿದ ಹೊಸ ಕಾನೂನನ್ನು ಆಧರಿಸಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ.
ವಾಯು, ಸಮುದ್ರ ಅಥವಾ ಭೂಮಿ ಮಾರ್ಗ ಮೂಲಕ ಐವತ್ತು ಸಾವಿರ ರಿಯಾಲ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸರಕುಗಳನ್ನು ದೇಶಕ್ಕೆ ಅಥವಾ ದೇಶದಿಂದ ಹೊರಗೆ ತರಬೇಕಾದರೆ ಇನ್ನು ಮುಂದೆ, ಅಫಿಡವಿಟ್ ಅನ್ನು ಭರ್ತಿ ಮಾಡಬೇಕು. ಪ್ರಶ್ನಾವಳಿಯು, ಈ ವಸ್ತುಗಳನ್ನು ಹೇಗೆ ಪಡೆಯಲಾಗಿದೆ, ಅವುಗಳನ್ನು ಏಕೆ ಸಾಗಿಸಲಾಗುತ್ತದೆ ಮುಂತಾದ ಎಲ್ಲಾ ಪ್ರಶ್ನೆಗಳನ್ನು ಒಳಗೊಂಡಿದೆ.
ಅಫಿಡವಿಟ್ ಅನ್ನು ಪರಿಶೀಲಿಸಿ, ಮತ್ತು ದೃಢೀಕರಿಸಿದ ಬಳಿಕ ಮಾತ್ರ ಅಂತಹ ವಹಿವಾಟುಗಳನ್ನು ಅನುಮತಿಸಲಾಗುತ್ತದೆ. ಹೊಸ ನಿಯಮವು ಎಲ್ಲಾ ಕರೆನ್ಸಿಗಳು, ಚಿನ್ನ, ಬೆಳ್ಳಿ, ವಜ್ರಗಳು, ಆಭರಣಗಳು, ನಗದು ಚೆಕ್ಗಳಿಗೂ ಅನ್ವಯಿಸುತ್ತದೆ.
ಸುಳ್ಳು ಮಾಹಿತಿ ನೀಡುವುದು ಅಥವಾ ಅಫಿಡವಿಟ್ನ ಕೆಲವು ಭಾಗಗಳನ್ನು ಭರ್ತಿ ಮಾಡದಿದ್ದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮತ್ತು ಒಂದು ಲಕ್ಷ ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು