ಕುವೈತ್ ಸಿಟಿ: ಕುವೈತ್ನಲ್ಲಿ ಬಂಧನಕ್ಕೊಳಗಾದ ವಿದೇಶಿ ಪ್ರಜೆಗಳನ್ನು ಊರಿಗೆ ವಾಪಸ್ ಕಳುಹಿಸಲು ಕುವೈತ್ ಯೋಜಿಸಿದೆ. ಉಳಿದ ಕಾಲಾವಧಿಯನ್ನು ತಮ್ಮ ಊರಿನ ಜೈಲಿನಲ್ಲಿ ಕಳೆಯುವ ಷರತ್ತಿನ ಮೇಲೆ ಊರಿಗೆ ಕಳುಹಿಸಲು ಕುವೈತ್ ಯೋಜಿಸಿದ್ದು, ಭಾರತ ಸೇರಿದಂತೆ ಏಳು ದೇಶಗಳ ಸಹಕಾರವನ್ನು ಕುವೈತ್ ಬಯಸುತ್ತಿದೆ.
ಕುವೈತ್ನ ಕೇಂದ್ರ ಕಾರಾಗೃಹದಲ್ಲಿ ಹೆಚ್ಚಿನ ಸಂಖ್ಯೆಯ ಕೈದಿಗಳ ದಟ್ಟಣೆಯನ್ನು ಮನಗಂಡು ಈ ತೀರ್ಮಾನಕ್ಕೆ ಕುವೈತ್ ಮುಂದಾಗಿದೆ ಎನ್ನಲಾಗಿದೆ. ಅಗತ್ಯವಿದ್ದಾಗ ಕೈದಿಗಳ ಮರಳುವಿಕೆಗೆ ಸಂಬಂಧಪಟ್ಟ ದೇಶಗಳು ಖಾತರಿ ನೀಡಬೇಕೆಂಬ ಷರತ್ತಿನ ಮೇಲೆ ಕುವೈತ್ ಭಾರತ, ಇರಾನ್, ಈಜಿಪ್ಟ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಸಹಕಾರವನ್ನು ಕೋರಿದ್ದು, ಇವು ಕೈದಿಗಳನ್ನು ವರ್ಗಾವಣೆ ಮಾಡುವ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದ ದೇಶಗಳಾಗಿವೆ.
ರಾಷ್ಟ್ರೀಯ ಭದ್ರತಾ ಅಪರಾಧಿಗಳನ್ನು ಹಸ್ತಾಂತರಿಸುವುದಿಲ್ಲ ಎಂದು ಕುವೈತ್ ಘೋಷಿಸಿದೆ. ಆದರೆ ಕುವೈತ್ ಪ್ರಸ್ತಾಪಕ್ಕೆ ಇರಾನ್ ಮತ್ತು ಇರಾಕ್ ಮಾತ್ರ ಪ್ರತಿಕ್ರಿಯಿಸಿದವು. ಕಳೆದ ಕೆಲವು ದಿನಗಳಲ್ಲಿ, ಇರಾಕ್ 13 ಖೈದಿಳನ್ನು ಮತ್ತು ಇರಾನ್ ಮೂರು ಬ್ಯಾಚ್ ಗಳಲ್ಲಿ 130 ಕೈದಿಗಳನ್ನು ಸ್ವೀಕರಿಸಿದೆ. ಪ್ರಸ್ತುತ ಸುಮಾರು 500 ಭಾರತೀಯ ಖೈದಿಗಳು ವಿವಿಧ ಅಪರಾಧಗಳಿಗೆ ಸಂಬಂಧಿಸಿ ಕುವೈತ್ನ ಜೈಲಿನಲ್ಲಿದ್ದಾರೆ, ಕೈದಿಗಳನ್ನು ಹಸ್ತಾಂತರಿಸುವ ಬಗ್ಗೆ 5 ವರ್ಷಗಳ ಹಿಂದೆ ಭಾರತ ಮತ್ತು ಕುವೈತ್ ನಡುವೆ ಒಪ್ಪಂದ ನಡೆದಿದ್ದವು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ