ಗುರುಪುರ: ಶಿಕ್ಷಣವೇ ಸಂಪತ್ತು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ತ್ವೖಬಾ ಖುರ್ ಆನ್ ಅಕಾಡೆಮಿ ಗುರುಪುರ ಕೈಕಂಬ ಇದರ ಆಶ್ರಯದಲ್ಲಿ ವಿಶ್ವ ಪ್ರವಾದಿ (ಸ.ಅ) ಜನ್ಮದಿನಾಚರಣೆಯ ಪ್ರಯುಕ್ತ ಮೀಲಾದ್ ಫೆಸ್ಟ್-19 ಕಾರ್ಯಕ್ರಮವು ಇದೇ ಬರುವ ನವೆಂಬರ್ 29,ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಮೆಗಾ ಫ್ಲಾಝಾ ಹಾಲ್ ನಲ್ಲಿ ನಡೆಯಲಿದೆ.
ಅಸರ್ ನಮಾಝಿನ ಬಳಿಕ ಮೌಲಿದ್ ಪಾರಾಯಣ, ಮಗ್ರಿಬ್ ನಮಾಝಿನ ಬಳಿಕ ಪ್ರತಿಭಾ ಸಮ್ಮಿಲನ, ದಫ್ ಪ್ರದರ್ಶನ, ಬುರ್ದಾ ಮಜ್ಲಿಸ್ ನಡೆಯಲಿದೆ.ಸಂಸ್ಥೆಯ ಚಯರ್ಮ್ಯಾನ್ ಹಾಫಿಝ್ ಅನ್ಸಾರ್ ಸಅದಿ ಬಡಕಬೈಲ್ ರವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಪ್ರಮುಖವಾಗಿ ಬಹು॥ಸಯ್ಯಿದ್ ನಿಝಾಮುದ್ದೀನ್ ಬಾಫಕಿ ತಂಙಳ್ ಮಲ್ಲೂರು, ಬಹು॥ ಸಯ್ಯಿದ್ ತ್ವಾಹ ತಂಙಳ್ ಮಲಪ್ಪುರಂ, ಬಹು॥ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಲಕ್ಷದ್ವೀಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಎಂದು ತ್ವೖಬಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.