janadhvani

Kannada Online News Paper

ಉಜಿರೆ ಟೌನ್ ಮೀಲಾದ್ ಸಮಾವೇಶ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಉಜಿರೆ: ಬದ್ರಿಯಾ ಜುಮ್ಮಾ ಮಸ್ಜಿದ್ ಹಾಗೂ ಗೌಸಿಯಾ ಯಂಗ್‌ಮೆನ್ಸ್ ಉಜಿರೆ ಟೌನ್ ಇದರ ಆಶ್ರಯದಲ್ಲಿ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ಮಾಸಾಚರಣೆಯ ಅಂಗವಾಗಿ ಮೀಲಾದ್ ಸಮಾವೇಶ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 22/11/2019 ನೇ ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜುಮ್ಮಾ ಮಸ್ಜಿದ್ ಉಜಿರೆ ಟೌನ್ ಇದರ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ARTಯವರು ವಹಿಸಿದ್ದರು,ಈ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟಿಸಿದರು.MJM ಹಳೆಪೇಟೆ ಉಜಿರೆಯ ಖತೀಬರಾದ B.A ಅಬ್ಬಾಸ್ ಮದನಿಯವರು ಮುಖ್ಯ ಪ್ರಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ S.M ಕೋಯ ತಂಙಳ್ ಹಾಗೂ ಗೌಸಿಯಾ ಯಂಗ್‌ಮೆನ್ಸ್ ಉಜಿರೆ ಟೌನ್ ಇದರ ಅಧ್ಯಕ್ಷರಾದ ತಮೀಮ್,MJM ಉಜಿರೆ ಖತೀಬರಾದ ಅಬ್ಬಾಸ್ ಮದನಿ,BHM ಖತೀಬರಾದ ಮುಹಮ್ಮದ್ ಶರೀಫ್ ಹಿಮಮಿ ಹಾಗೂ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆಯಿಶತ್ ಸಫೀದಾ ಇವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಸ್ತಾಕ್ ತಂಙಳ್ ಉಜಿರೆ,MJM ಉಜಿರೆ ಇದರ ಉಪಾಧ್ಯಕ್ಷರಾದ U.A ಹಮೀದ್ ಬೆಡ್‌ಮಾರ್ಟ್,BHM ಇದರ ಪ್ರ.ಕಾರ್ಯದರ್ಶಿ ಬಶೀರ್ ಅಪ್ನಿ,ಕೋಶಾಧಿಕಾರಿ ಮುಹಮ್ಮದ್ ತಾಜ್,ಗೌಸಿಯಾ ಯಂಗ್‌ಮೆನ್ಸ್ ಪ್ರ.ಕಾರ್ಯದರ್ಶಿ ಮನ್ಸೂರ್ ಓಡಲ,BHM ಉಸ್ತಾದರಾದ ಮುಸ್ತಫಾ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್, ಅಬೂಬಕ್ಕರ್ ಝೈನಿ, ಹಾಗೂ ಸ್ಥಾಪಕ ಅಧ್ಯಾಪಕರಾದ ಖಾಲಿದ್ ಮುಸ್ಲಿಯಾರ್,ಹಾಗೂ ಗೌಸಿಯಾ ಯಂಗ್‌ಮೆನ್ಸ್ ಸದಸ್ಯರು ಉಪಸ್ಥಿತರಿದ್ದರು.

✍ ಎಂ.ಎಂ.ಉಜಿರೆ

error: Content is protected !! Not allowed copy content from janadhvani.com