ಕೈಕಂಬ:ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ) ರವರನ್ನು ಹೃದಯದಲ್ಲಿ ಪ್ರೇಮಿಸುವ ಮೂಲಕ ಜೀವನ ಧನ್ಯಗೊಳಿಸಬೇಕೆಂದೂ ಈ ಮೂಲಕ ನೈಜ ಮಾನವನಾಗಿ ಬದುಕಬೇಕೆಂದು ಮರ್ಕಝ್ ನೋಲೇಜ್ ಸಿಟಿಯ ಡೈರಕ್ಟರ್, ಪ್ರಮುಖ ವಿದ್ವಾಂಸರೂ ಆದ ಡಾ. AP ಅಬ್ದುಲ್ ಹಕೀಂ ಅಝ್ಹರಿ ಹೇಳಿದರು.ಅವರು ಅಸಾಸ್ ಎಜುಕೇಷನಲ್ ಸೆಂಟರ್ ಮಲ್ಲೂರಿನಲ್ಲಿ ಸುಬಹಿ ನಮಾಝಿನ ಬಳಿಕ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು.
ಅಸಾಸ್ ಸಂಸ್ಥೆಯ ಸಾರಥಿಯೂ SYS ರಾಜ್ಯ ನಾಯಕರೂ ಆದ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೂನೂರು ಮರ್ಕಝ್ ಗಾರ್ಡನ್ ಮೇಲ್ವಿಚಾರಕರಾದ ಅಬೂಸ್ವಾಲಿಹ್ ಸಖಾಫಿ ,ಎಸ್ ಜೆ ಎಂ ಕೈಕಂಬ ಅಧ್ಯಕ್ಷರಾದ ಕಾಸಿಂ ಮದನಿ ಮಲ್ಲೂರು, ಎಸ್ ಜೆ ಎಂ ಕೈಕಂಬ ರೇಂಜ್ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ, ಎಸ್.ಎಂ.ಎ ಕೈಕಂಬ ರೀಜನಲ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಂಗ್ಲಗುಡ್ಡೆ ಸಂಸ್ಥೆಯ ಮುದರ್ರಿಸ್ ಹುಸೈನ್ ಸಖಾಫಿ, ಮುಹಬ್ಬತೇ ಅಸಾಸ್ ಸಮಿತಿಯ ನೇತಾರರು ಕಾರ್ಯಕರ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮೀಲಾದ್ ಜಾಥಾಕ್ಕೆ ಧ್ವಜಾರೋಹಣ ಮಾಡುವ ಮೂಲಕ AP ಅಬ್ದುಲ್ ಹಕೀಂ ಅಝ್ಹರಿರವರು ಚಾಲನೆ ನೀಡಿದರು.
ಇಬ್ರಾಹಿಮ್ ಕಲೀಲ್ ಅಬ್ಬೆಟ್ಟು (ಮುಹಬ್ಬತೇ ಅಸಾಸ್ ಕಮಿಟಿಯ ಪ್ರ ಕಾರ್ಯದರ್ಶಿ)















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್