ಜಿದ್ದಾ: ದಾರುಲ್ ಇರ್ಷಾದ್ ಮಾಣಿ ಜಿದ್ದಾ ಕಮಿಟಿ ಇದರ ಆಶ್ರಯದಲ್ಲಿ ಇಷ್ಕೇ ರಸೂಲ್ ﷺ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಜಿದ್ದಾದ ಕೆಸಿಎಫ್ ಭವನದಲ್ಲಿ ನಡೆಯಿತು.
ಸ್ವಲಾತ್ ಮಜ್ಲಿಸ್ ಗೆ ಉಮರ್ ಸಖಾಫಿ ಪರಪ್ಪು ಉಸ್ತಾದರು ನೇತೃತ್ವ ನೀಡಿದರು, ದುಆಃ ವನ್ನು ಸಯ್ಯಿದ್ ಝಕರಿಯ್ಯ ಸಖಾಫಿ ನಾವುಂದ ರವರು ನೆರವೇರಿಸಿ ಕೊಟ್ಟರು.
ಮುತ್ತು ನಬಿ ﷺ ಮದ್ ಹ್ ಮತ್ತು ಬುರ್ದಾ ಬೈತ್ ಆಲಾಪಿಸಲಾಯಿತು. ನಂತರ ಪ್ರೌಢ ಗಾಂಭೀರ್ಯ ಹುಬ್ಬುರ್ರಸೂಲ್ ಫ್ರಭಾಷಣ ಮಾಡಿದ ಉಮ್ಮರ್ ಸಖಾಫಿ ಉಸ್ತಾದರು, ನಬಿ ﷺ ರವರ ಅನುಯಾಯಿಗಳಾಗಿ, ಭಯ ಭಕ್ತಿಯೊಂದಿಗೆ ನಬಿಯವರ ಚರ್ಯೆ ಯನ್ನು ಪಾಲಿಸಿ ಜೀವಿಸಬೇಕೆಂದು ಕರೆ ನೀಡಿದರು.
ನವೆಂಬರ್ ಮೂರರಂದು ಕೆ.ಜಿ.ಎನ್ ಮಿತ್ತೂರು ನಲ್ಲಿ ಉದ್ಘಾಟನೆ ಗೊಳ್ಳಲಿರುವ ನೂತನ ನವೀಕೃತ ಮಸ್ಜಿದ್ ಬದ್ರ್ ರನ್ನು ಉಮರ್ ಸಖಾಫಿ ಉಸ್ತಾದರು ಪ್ರಚಾರ ಪಡಿಸಿ, ಊರಲ್ಲಿರುವ ಎಲ್ಲಾ ಪ್ರವಾಸಿಗಳನ್ನು ಕಾರ್ಯಕ್ರಮಕ್ಕೆ ಶೈಖುನಾ ಝೈನುಲ್ ಉಲಮಾ ಆಹ್ವಾನ ನೀಡಲು ತಿಳಿಸಿದ್ದಾರೆ ಎಂದು ಈ ಸಂದರ್ಭ ಮನವಿ ಮಾಡಿದರು.
ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್, ಅಬ್ದುಲ್ ಹಮೀದ್ ಫೈಝಿ ಉಸ್ತಾದ್, ಇಕ್ಬಾಲ್ ಹಾಜಿ ಉಳ್ಳಾಲ, ಕೆಸಿಎಫ್ ನೇತಾರರು, ಇತರ ಸುನ್ನೀ ಸಂಘ ಸಂಸ್ಥೆಗಳ ನೇತಾರರು ,ಉಮರಾಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು