janadhvani

Kannada Online News Paper

ಜಿದ್ದಾ: ದಾರುಲ್ ಇರ್ಷಾದ್ ವತಿಯಿಂದ ಇಷ್ಕೇ ರಸೂಲ್ ﷺ ಮಜ್ಲಿಸ್

ಜಿದ್ದಾ: ದಾರುಲ್ ಇರ್ಷಾದ್ ಮಾಣಿ ಜಿದ್ದಾ ಕಮಿಟಿ ಇದರ ಆಶ್ರಯದಲ್ಲಿ ಇಷ್ಕೇ ರಸೂಲ್ ﷺ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಜಿದ್ದಾದ ಕೆಸಿಎಫ್ ಭವನದಲ್ಲಿ ನಡೆಯಿತು.

ಸ್ವಲಾತ್ ಮಜ್ಲಿಸ್ ಗೆ ಉಮರ್ ಸಖಾಫಿ ಪರಪ್ಪು ಉಸ್ತಾದರು ನೇತೃತ್ವ ನೀಡಿದರು, ದುಆಃ ವನ್ನು ಸಯ್ಯಿದ್ ಝಕರಿಯ್ಯ ಸಖಾಫಿ ನಾವುಂದ ರವರು ನೆರವೇರಿಸಿ ಕೊಟ್ಟರು.

ಮುತ್ತು ನಬಿ ﷺ ಮದ್ ಹ್ ಮತ್ತು ಬುರ್ದಾ ಬೈತ್ ಆಲಾಪಿಸಲಾಯಿತು. ನಂತರ ಪ್ರೌಢ ಗಾಂಭೀರ್ಯ ಹುಬ್ಬುರ್ರಸೂಲ್ ಫ್ರಭಾಷಣ ಮಾಡಿದ ಉಮ್ಮರ್ ಸಖಾಫಿ ಉಸ್ತಾದರು, ನಬಿ ﷺ ರವರ ಅನುಯಾಯಿಗಳಾಗಿ, ಭಯ ಭಕ್ತಿಯೊಂದಿಗೆ ನಬಿಯವರ ಚರ್ಯೆ ಯನ್ನು ಪಾಲಿಸಿ ಜೀವಿಸಬೇಕೆಂದು ಕರೆ ನೀಡಿದರು.ನವೆಂಬರ್ ಮೂರರಂದು ಕೆ.ಜಿ.ಎನ್ ಮಿತ್ತೂರು ನಲ್ಲಿ ಉದ್ಘಾಟನೆ ಗೊಳ್ಳಲಿರುವ ನೂತನ ನವೀಕೃತ ಮಸ್ಜಿದ್ ಬದ್ರ್ ರನ್ನು ಉಮರ್ ಸಖಾಫಿ ಉಸ್ತಾದರು ಪ್ರಚಾರ ಪಡಿಸಿ, ಊರಲ್ಲಿರುವ ಎಲ್ಲಾ ಪ್ರವಾಸಿಗಳನ್ನು ಕಾರ್ಯಕ್ರಮಕ್ಕೆ ಶೈಖುನಾ ಝೈನುಲ್ ಉಲಮಾ ಆಹ್ವಾನ ನೀಡಲು ತಿಳಿಸಿದ್ದಾರೆ ಎಂದು ಈ ಸಂದರ್ಭ ಮನವಿ ಮಾಡಿದರು.

ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್, ಅಬ್ದುಲ್ ಹಮೀದ್ ಫೈಝಿ ಉಸ್ತಾದ್, ಇಕ್ಬಾಲ್ ಹಾಜಿ ಉಳ್ಳಾಲ, ಕೆಸಿಎಫ್ ನೇತಾರರು, ಇತರ ಸುನ್ನೀ ಸಂಘ ಸಂಸ್ಥೆಗಳ ನೇತಾರರು ,ಉಮರಾಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com